Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
National

ದೇಶಾದ್ಯಂತ ಡಿಆರ್‌ಐ ಕಾರ್ಯಾಚರಣೆ; ಡ್ರಗ್ಸ್, ಪಾಕಿಸ್ತಾನಿ ಪಿಸ್ತೂಲ್‌, ₹20 ಕೋಟಿ ಮೌಲ್ಯದ ಸಿಗರೇಟ್ ವಶ

By ANU News
July 19, 2026 1 Min Read
0

ನವದೆಹಲಿ: ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ದೇಶದ ವಿವಿಧ ರಾಜ್ಯಗಳಲ್ಲಿ ನಡೆಸಿದ ಸಮನ್ವಯ ಕಾರ್ಯಾಚರಣೆಯಲ್ಲಿ 15 ಕೆಜಿ ಮೆಥಾಂಫೆಟಮೈನ್ ಮಾತ್ರೆಗಳು, ಸುಮಾರು 4 ಕೆಜಿ ಸ್ಯೂಡೋಎಫೆಡ್ರಿನ್, ₹20 ಕೋಟಿ ಮೌಲ್ಯದ 85 ಲಕ್ಷ ವಿದೇಶಿ ಸಿಗರೇಟ್‌ಗಳು ಹಾಗೂ ಎರಡು ಪಾಕಿಸ್ತಾನ ನಿರ್ಮಿತ ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿದೆ. ಪ್ರಕರಣಗಳಿಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.

ಮಿಜೋರಾಂನ ಐಜ್ವಾಲ್–ಚಂಫೈ ರಸ್ತೆಯಲ್ಲಿ ಜುಲೈ 15ರಂದು ಟ್ರಕ್‌ವೊಂದನ್ನು ತಪಾಸಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು, ವಾಹನದೊಳಗೆ ಅಡಗಿಸಿಟ್ಟಿದ್ದ 15 ಕೆಜಿ ಮೆಥಾಂಫೆಟಮೈನ್ ಮಾತ್ರೆಗಳನ್ನು ಪತ್ತೆಹಚ್ಚಿದರು. ಪ್ರಾಥಮಿಕ ತನಿಖೆಯಲ್ಲಿ ಈ ಮಾದಕ ವಸ್ತುಗಳನ್ನು ಮ್ಯಾನ್ಮಾರ್‌ನಿಂದ ಜೋಖಾವ್ತಾರ್ ಮಾರ್ಗವಾಗಿ ಕಳ್ಳಸಾಗಣೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಒಬ್ಬನನ್ನು ಎನ್‌ಡಿಪಿಎಸ್ ಕಾಯ್ದೆಯಡಿ ಬಂಧಿಸಲಾಗಿದೆ.

ಮುಂಬೈನ ನವಾ ಶೇವಾ ಬಂದರಿನಲ್ಲಿ ನಡೆದ ಮತ್ತೊಂದು ಕಾರ್ಯಾಚರಣೆಯಲ್ಲಿ, ಪ್ಲಾಸ್ಟಿಕ್ ಸಂಗ್ರಹ ಪೆಟ್ಟಿಗೆಗಳೆಂದು ಘೋಷಿಸಲಾಗಿದ್ದ ಆಮದು ಕಂಟೇನರ್‌ನಿಂದ ₹20 ಕೋಟಿ ಮೌಲ್ಯದ ಸುಮಾರು 85 ಲಕ್ಷ ವಿದೇಶಿ ನಿರ್ಮಿತ ಗೋಲ್ಡ್ ಫ್ಲೇಕ್ ಸಿಗರೇಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪಂಜಾಬ್‌ನ ಅಮೃತಸರ ಗಡಿಭಾಗದಲ್ಲಿ ಡ್ರೋನ್ ಮೂಲಕ ಬೀಳಿಸಲಾಗಿದ್ದ ಎರಡು ಪಾಕಿಸ್ತಾನ ನಿರ್ಮಿತ ಪಿಸ್ತೂಲ್‌ಗಳು ಹಾಗೂ ಮ್ಯಾಗಜೀನ್‌ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಾಗಿ ಅವುಗಳನ್ನು ಸ್ಥಳೀಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

ಚೆನ್ನೈನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೆಥಾಂಫೆಟಮೈನ್ ತಯಾರಿಕೆಗೆ ಬಳಸುವ ಸುಮಾರು 4 ಕೆಜಿ ಸ್ಯೂಡೋಎಫೆಡ್ರಿನ್ ಪತ್ತೆಯಾಗಿದ್ದು, ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಮಾದಕವಸ್ತು, ಅಕ್ರಮ ತಂಬಾಕು ಹಾಗೂ ಗಡಿಯಾಚೆಗಿನ ಶಸ್ತ್ರಾಸ್ತ್ರ ಕಳ್ಳಸಾಗಣೆ ಜಾಲಗಳನ್ನು ಬೇಧಿಸುವ ಕಾರ್ಯಾಚರಣೆಗಳು ಮುಂದುವರಿಯಲಿವೆ ಎಂದು ಡಿಆರ್‌ಐ ತಿಳಿಸಿದೆ.

Author

ANU News

Follow Me
Other Articles
Previous

DRI busts nationwide smuggling network; drugs, arms and cigarettes seized

Next

ವಿಕ್ರಮ್-1 ಯಶಸ್ವಿ ಉಡಾವಣೆ; ಭಾರತದ ಖಾಸಗಿ ಬಾಹ್ಯಾಕಾಶ ಕ್ಷೇತ್ರಕ್ಕೆ ಐತಿಹಾಸಿಕ ಮೈಲಿಗಲ್ಲು

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Bengaluru lab under scanner after surprise inspection; minister orders probe
    • ಅನುಮತಿ ಇಲ್ಲದೆ ಪ್ರಯೋಗಾಲಯ ಕಾರ್ಯಾಚರಣೆ: ಸಚಿವ ರಾಮಲಿಂಗಾ ರೆಡ್ಡಿ ದಿಢೀರ್ ಪರಿಶೀಲನೆ
    • ಹಿರಿಯ ರಂಗಕರ್ಮಿ ಚಿದಂಬರರಾವ್ ಜಂಬೆ ನಿಧನ
    • ಗೋನೂರು ತಲುಪಿದ ಭದ್ರಾ ನೀರು: ಸೆ.24ರಂದು ಸಿಎಂ ಗಂಗಾಪೂಜೆ
    • Karnataka: Rs 1,281-crore irrigation project sanctioned under BJP govt, says MLC CT Ravi
    Copyright 2026 — ANU News. All rights reserved. Blogsy WordPress Theme