Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಆಂಧ್ರ-ತೆಲಂಗಾಣ-ಕರ್ನಾಟಕ ಸಿಎಂಗಳ ಒಗ್ಗಟ್ಟಿಗೆ ಸಾಕ್ಷಿಯಾದ ‘ತುಂಗಭದ್ರಾ’

By ANU News
June 25, 2026 1 Min Read
0

ಕೊಪ್ಪಳ: ಮುನಿರಾಬಾದ್‌ನ ಐತಿಹಾಸಿಕ ತುಂಗಭದ್ರಾ ಜಲಾಶಯದಲ್ಲಿ ನೂತನ 18, 19, 20 ಮತ್ತು 21ನೇ ಕ್ರಸ್ಟ್ ಗೇಟ್‌ಗಳನ್ನು ಗುರುವಾರ ಅದ್ಧೂರಿಯಾಗಿ ಲೋಕಾರ್ಪಣೆ ಮಾಡಲಾಯಿತು.

ಈ ಮಹತ್ವದ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣದ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಭಾಗವಹಿಸಿದರು. ಗಣ್ಯರು ಜಂಟಿಯಾಗಿ ಬಟನ್ ಒತ್ತುವ ಮೂಲಕ ನೂತನ ಗೇಟ್‌ಗಳ ಉದ್ಘಾಟನೆ ನೆರವೇರಿಸಿದರು.

ಲೋಕಾರ್ಪಣೆ ಬಳಿಕ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಗೇಟ್‌ಗಳನ್ನು ವೀಕ್ಷಿಸಿ ಮಾಹಿತಿ ಪಡೆದರು. ಈ ವೇಳೆ ತುಂಗಭದ್ರಾ ಜಲಾಶಯದ ಅಧಿಕಾರಿಗಳು ನೂತನ ಕ್ರಸ್ಟ್ ಗೇಟ್‌ಗಳ ತಾಂತ್ರಿಕ ವೈಶಿಷ್ಟ್ಯಗಳು ಹಾಗೂ ಅವುಗಳ ಕಾರ್ಯವೈಖರಿ ಕುರಿತು ವಿವರಿಸಿದರು.

ಜಲಾಶಯದ ಸುರಕ್ಷತೆ ಮತ್ತು ನೀರು ನಿರ್ವಹಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಗೇಟ್‌ಗಳನ್ನು ಅಳವಡಿಸಲಾಗಿದೆ. ಇದರಿಂದ ನೀರಿನ ಹರಿವಿನ ನಿಯಂತ್ರಣ ಸುಧಾರಣೆಯಾಗಲಿದ್ದು, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಕೃಷಿ, ಕುಡಿಯುವ ನೀರು ಮತ್ತು ನೀರಾವರಿ ಅಗತ್ಯಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತುಂಗಭದ್ರಾ ಜಲಾಶಯದ ಅಭಿವೃದ್ಧಿ ಮತ್ತು ಆಧುನೀಕರಣದ ದಿಸೆಯಲ್ಲಿ ಈ ಯೋಜನೆ ಮಹತ್ವದ ಮೈಲಿಗಲ್ಲಾಗಿದ್ದು, ಜಲಾಶಯದ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ಸಾಕ್ಷಿಯಾಗಿದೆ.

Author

ANU News

Follow Me
Other Articles
Previous

ಶತಮಾನ ಕಂಡರಿಯದ ಭೂಕಂಪ; ಸ್ಮಶಾನದಂತಾದ ವೆನೆಜುವೆಲಾ

Next

Three CMs unite for inauguration of new crest gates at Tungabhadra reservoir

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಇರಾನ್‌ಗೆ ಅಣ್ವಸ್ತ್ರ ಹೊಂದಲು ಎಂದಿಗೂ ಅವಕಾಶವಿಲ್ಲ; ಆಯಕಟ್ಟಿನ ಜಲಮಾರ್ಗಗಳ ಮೇಲೆ ಅಮೆರಿಕದ ನಿಯಂತ್ರಣ: ಟ್ರಂಪ್
    • Trump says US ‘essentially controlling’ strategic waterways linked to Iran
    • Mangaluru railway area to come under Mysuru division of SWR from Oct 1: Brijesh Chota
    • ಮಂಗಳೂರು ರೈಲ್ವೆ ಪ್ರದೇಶ ಅಕ್ಟೋಬರ್ 1ರಿಂದ ಮೈಸೂರು ವಿಭಾಗದ ವ್ಯಾಪ್ತಿಗೆ: ಸಂಸದ ಬ್ರಿಜೇಶ್ ಚೌಟ
    • Rahul’s protest over pellet injury ‘anarchy politics’ to divert attention from Vande Mataram row: Ravi Shankar Prasad
    Copyright 2026 — ANU News. All rights reserved. Blogsy WordPress Theme