Skip to content
ANU News
ANU News
  • Home
  • Home
ANU News
ANU News
  • Home
  • Home
ದೇಶ

ಭಾರತೀಯ ವಿಜ್ಞಾನಿಗಳ ಯಶೋಗಾಥೆ; ಅಪರೂಪದ ಅಲ್ಟ್ರಾ-ಕಾಂಪ್ಯಾಕ್ಟ್ ಸ್ಟೆಲ್ಲಾರ್ ಬೈನರಿ ಸಿಸ್ಟಮ್ ಪತ್ತೆ

By ANU News
May 20, 2026 1 Min Read
0

ನವದೆಹಲಿ: ಖಗೋಳಶಾಸ್ತ್ರ ಕ್ಷೇತ್ರದಲ್ಲಿ ಭಾರತೀಯ ವಿಜ್ಞಾನಿಗಳು ಮಹತ್ವದ ಸಾಧನೆ ಮಾಡಿದ್ದು, ಇದುವರೆಗೆ ಪತ್ತೆಯಾದ ಅತ್ಯಂತ ಕಡಿಮೆ ಕಕ್ಷಾ ಅವಧಿಯ ನಾಕ್ಷತ್ರಿಕ ಬೈನರಿ ಸಿಸ್ಟಮ್‌ಗಳಲ್ಲಿ ಒಂದನ್ನು ಗುರುತಿಸಿದ್ದಾರೆ.

ಈ ಅಪರೂಪದ ವ್ಯವಸ್ಥೆಯಲ್ಲಿ ಕಂದು ಕುಬ್ಜ ಸಹಚರ ಹೊಂದಿರುವ ನೀಲಿ ಸ್ಟ್ರಾಗ್ಲರ್ ನಕ್ಷತ್ರವನ್ನು ಮೊದಲ ಬಾರಿಗೆ ದೃಢೀಕರಿಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಗುವಾಹಟಿ ವಿಶ್ವವಿದ್ಯಾಲಯ, ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ, ಆರ್ಯಭಟ್ಟ ಸಂಶೋಧನಾ ಸಂಸ್ಥೆ ಹಾಗೂ ಇಟಲಿಯ ಐಎನ್‌ಎಎಫ್-ಕ್ಯಾಟಾನಿಯಾ ಆಸ್ಟ್ರೋಫಿಸಿಕಲ್ ಅಬ್ಸರ್ವೇಟರಿ ವಿಜ್ಞಾನಿಗಳ ತಂಡ ಈ ಸಂಶೋಧನೆ ನಡೆಸಿದೆ.

ಹೊಸದಾಗಿ ಪತ್ತೆಯಾದ ಈ ಬೈನರಿ ಸಿಸ್ಟಮ್ ಕೇವಲ 5.6 ಗಂಟೆಗಳ ಕಕ್ಷಾ ಅವಧಿ ಹೊಂದಿದ್ದು, ಇದನ್ನು ಅತ್ಯಂತ ಸಾಂದ್ರ ಬೈನರಿ ವ್ಯವಸ್ಥೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಈ ವ್ಯವಸ್ಥೆಯಲ್ಲಿರುವ ಕಂದು ಕುಬ್ಜವು ಗ್ರಹಕ್ಕಿಂತ ದೊಡ್ಡದಾಗಿದ್ದರೂ ಸಾಮಾನ್ಯ ನಕ್ಷತ್ರದಂತೆ ಹೈಡ್ರೋಜನ್ ಸಂಯೋಜನೆ ನಡೆಸಲು ಸಾಕಷ್ಟು ದ್ರವ್ಯರಾಶಿ ಹೊಂದಿಲ್ಲ. ಇದರ ದ್ರವ್ಯರಾಶಿ ಸೂರ್ಯನ ದ್ರವ್ಯರಾಶಿಗಿಂತ ಸುಮಾರು 0.056 ಪಟ್ಟು ಹೆಚ್ಚಿದೆ ಎಂದು ಅಧ್ಯಯನ ತಿಳಿಸಿದೆ.

ವಿಜ್ಞಾನಿಗಳ ಪ್ರಕಾರ, ಇದು ನೀಲಿ ಸ್ಟ್ರಾಗ್ಲರ್ ನಕ್ಷತ್ರದ ಸುತ್ತ ಪತ್ತೆಯಾದ ಅತಿ ಹಗುರದ ಸಹಚರವಾಗಿರಬಹುದು.

ನೀಲಿ ಸ್ಟ್ರಾಗ್ಲರ್ ನಕ್ಷತ್ರಗಳು ಒಂದೇ ನಕ್ಷತ್ರ ಸಮೂಹದಲ್ಲಿನ ಇತರ ನಕ್ಷತ್ರಗಳಿಗಿಂತ ಹೆಚ್ಚು ಪ್ರಕಾಶಮಾನ ಮತ್ತು ಯುವ ಸ್ಥಿತಿಯಲ್ಲಿ ಕಾಣಿಸಿಕೊಳ್ಳುವುದರಿಂದ ಖಗೋಳ ವಿಜ್ಞಾನಿಗಳಿಗೆ ದೀರ್ಘಕಾಲದಿಂದಲೇ ಕುತೂಹಲ ಹುಟ್ಟಿಸಿವೆ.

ಈ ಆವಿಷ್ಕಾರ ನಕ್ಷತ್ರ ವಿಕಸನ ಮತ್ತು ಬೈನರಿ ನಕ್ಷತ್ರಗಳ ಸಂವಹನಗಳ ಬಗ್ಗೆ ಹೊಸ ಅರಿವು ನೀಡಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಸಂಶೋಧನೆ ‘ರಾಯಲ್ ಆಸ್ಟ್ರೋನಾಮಿಕಲ್ ಸೊಸೈಟಿ’ಯ ಮಾಸಿಕ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ತ್ರಿವಳಿ ನಕ್ಷತ್ರ ವ್ಯವಸ್ಥೆಯ ವಿಕಸನದಿಂದ ಈ ವ್ಯವಸ್ಥೆ ರೂಪುಗೊಂಡಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

Author

ANU News

Follow Me
Other Articles
Previous

‘ಪ್ರಾಜೆಕ್ಟ್ ಚೀತಾ’ ಮತ್ತೊಂದು ಮೈಲಿಗಲ್ಲು; ದೇಶದಲ್ಲಿ ಚೀತಾಗಳ ಸಂಖ್ಯೆ 53ಕ್ಕೆ ಏರಿಕೆ

Next

ಡಿಆರ್‌ಡಿಒಗೆ ಮತ್ತೊಂದು ಯಶಸ್ಸು; ಯುಎವಿ ಕ್ಷಿಪಣಿ ಪರೀಕ್ಷೆ ಯಶಸ್ವಿ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Citizenship for Deserving Refugees Under CAA to Be Granted Soon: Amit Shah
    • ಧಾರ್ಮಿಕ ಕಿರುಕುಳದಿಂದ ಭಾರತಕ್ಕೆ ಬಂದಿರುವ ಅರ್ಹ ನಿರಾಶ್ರಿತರಿಗೆ ಶೀಘ್ರವೇ ಪೌರತ್ವ; ಅಮಿತ್ ಶಾ
    • Indian Organisations Must Work Together to Promote Cultural Diversity: Deputy Ambassador Sandeep Kumar
    • Vanamahotsava Held in Kammaje; Villagers Resolve to Protect Environment Through Tree Plantation
    • ಕಮ್ಮಾಜೆಯಲ್ಲಿ ವನಮಹೋತ್ಸವ: ಪರಿಸರ ಸಂರಕ್ಷಣೆಗೆ ಸಸಿ ನೆಡುವ ಸಂಕಲ್ಪ
    Copyright 2026 — ANU News. All rights reserved. Blogsy WordPress Theme