Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ರಿಯಲ್ ಎಸ್ಟೇಟ್ ಬಿಟ್ಟು ಜನರ ಸಮಸ್ಯೆ ಕಡೆ ಗಮನ ಹರಿಸಿ; ಸಿಎಂಗೆ ವಿಜಯೇಂದ್ರ ತರಾಟೆ

By ANU News
July 15, 2026 1 Min Read
0

ಬೆಂಗಳೂರು: ರಾಜ್ಯದಲ್ಲಿ ಬರ ಪರಿಸ್ಥಿತಿ ಗಂಭೀರವಾಗಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಜನರ ಸಮಸ್ಯೆಗಳ ಕಡೆ ಗಮನಹರಿಸಿ ತಕ್ಷಣ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಬರ ಪರಿಹಾರಕ್ಕಾಗಿ ಪ್ರಧಾನಿಗೆ ಪತ್ರ ಬರೆಯುವ ಬದಲು ರಾಜ್ಯ ಸರ್ಕಾರ ಇದುವರೆಗೆ ಕೈಗೊಂಡಿರುವ ಕ್ರಮಗಳನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದ್ದಾರೆ.

ಕಲಬುರಗಿಯಲ್ಲಿ ಬರ ಅಧ್ಯಯನಕ್ಕೆ ಸಚಿವರನ್ನು ನೇಮಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದನ್ನು ನೆನಪಿಸಿದ ವಿಜಯೇಂದ್ರ, “ರಾಜ್ಯಕ್ಕೆ ಇನ್ನೂ ಕೃಷಿ ಸಚಿವರೇ ಇಲ್ಲ. ಕಂದಾಯ ಸಚಿವರು ಕ್ಷೇತ್ರ ಬಿಟ್ಟು ಹೊರಬರುತ್ತಿಲ್ಲ. ಗ್ರಾಮೀಣಾಭಿವೃದ್ಧಿ ಸಚಿವರು ಬೇರೆ ವಿಷಯಗಳಲ್ಲಿ ನಿರತರಾಗಿದ್ದಾರೆ. ಕೈಗಾರಿಕಾ ಸಚಿವರು ರೋಡ್‌ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ. ಗೃಹ ಸಚಿವರು ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುತ್ತಿದ್ದಾರೆ. ಸಾರಿಗೆ ಸಚಿವರು ಬಸ್‌ ಪ್ರಯಾಣದಲ್ಲಿದ್ದಾರೆ. ನೀರಾವರಿ ಸಚಿವರಿಗೆ ಇಲಾಖೆಯಲ್ಲೇ ಆಸಕ್ತಿ ಇಲ್ಲ. ಜಿಲ್ಲೆಗಳಲ್ಲಿ ಕೆಡಿಪಿ ಸಭೆಗಳೂ ನಡೆದಿಲ್ಲ” ಎಂದು ಟೀಕಿಸಿದ್ದಾರೆ.

“ನಿಮ್ಮ ರಿಯಲ್ ಎಸ್ಟೇಟ್ ವ್ಯವಹಾರವನ್ನು ಬದಿಗಿಟ್ಟು ಜನರ ಸಮಸ್ಯೆಗಳ ಕಡೆ ಗಮನಹರಿಸಿ. ರೈತರಿಗೆ ತಕ್ಷಣ ಬರ ಪರಿಹಾರ ನೀಡಿ. ₹50 ಸಾವಿರ ಪರಿಹಾರ ಘೋಷಿಸಿ. ಕೇಂದ್ರ ಸರ್ಕಾರ ಅಧ್ಯಯನ ತಂಡ ಕಳುಹಿಸುವವರೆಗೂ ರಾಜ್ಯ ಸರ್ಕಾರ ತಾತ್ಕಾಲಿಕ ಪರಿಹಾರ ನೀಡಬೇಕು. ಬರ ಅಧ್ಯಯನಕ್ಕಾಗಿ ಸಚಿವರನ್ನು ಕೂಡಲೇ ನೇಮಿಸಬೇಕು” ಎಂದು ಅವರು ಒತ್ತಾಯಿಸಿದ್ದಾರೆ.

ಕೊನೆಯಲ್ಲಿ, “ತಿಮ್ಮಪ್ಪ ನಿಮಗೆ ಒಳ್ಳೆಯ ಬುದ್ಧಿ ನೀಡಲಿ” ಎಂದು ಹೇಳುವ ಮೂಲಕ ಮುಖ್ಯಮಂತ್ರಿ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.

Author

ANU News

Follow Me
Other Articles
Previous

ಕರ್ನಾಟಕದ ಹಣ ಕಾಂಗ್ರೆಸ್ ಪಕ್ಷದ ನಿಧಿಯಲ್ಲ; ಭಾರತ್ ಜೋಡೋ ಯುವ ಸಂಘ ಯೋಜನೆಗೆ ಆರ್.ಅಶೋಕ್ ಆಕ್ರೋಶ

Next

Vijayendra Urges CM to Focus on Drought Relief, Not ‘Real Estate Politics’

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • PM Modi meets Armenian counterpart on sidelines of SCO summit
    • SCO ಶೃಂಗಸಭೆ: ಅರ್ಮೇನಿಯಾ ಪ್ರಧಾನಿ ಜೊತೆ ಮೋದಿ ಮಾತುಕತೆ
    • KPSC veterinary recruitment scam: BJP leader Basavaraj Kannale arrested
    • ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಬಿಜೆಪಿ ಮುಖಂಡ ಬಸವರಾಜ್ ಕನ್ನಾಳೆ ಬಂಧನ
    • Bengaluru police send 31 Bangladeshi nationals to Malda for deportation
    Copyright 2026 — ANU News. All rights reserved. Blogsy WordPress Theme