Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶಪ್ರಾದೇಶಿಕ

ವಾಣಿಜ್ಯ LPG ಸಿಲಿಂಡರ್ ಭಾರೀ ದುಬಾರಿ; ಹೋಟೆಲ್, ರೆಸ್ಟೋರೆಂಟ್‌ಗಳಿಗೆ ಹೊರೆ ಹೆಚ್ಚಳ

By ANU News
May 1, 2026 1 Min Read
0

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯ ಬಳಿಕ, 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಭಾರೀ ಏರಿಕೆ ಮಾಡಲಾಗಿದೆ. ಮೇ 1ರಿಂದ ಜಾರಿಗೆ ಬರುವಂತೆ, ಸಿಲಿಂಡರ್ ದರವನ್ನು ಬರೋಬ್ಬರಿ ₹993 ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ನಿರ್ಧಾರದಿಂದ ಹೋಟೆಲ್, ರೆಸ್ಟೋರೆಂಟ್ ಹಾಗೂ ಇತರ ವಾಣಿಜ್ಯ ವಲಯಗಳಿಗೆ ನೇರ ಪರಿಣಾಮ ಬೀಳಲಿದೆ.

ಸಾಮಾನ್ಯ ಗ್ರಾಹಕರು ನಿರಾಳ

ವಾಣಿಜ್ಯ ಸಿಲಿಂಡರ್ ದರ ಏರಿಕೆಯ ನಡುವೆಯೇ, ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ದೇಶದ ಸುಮಾರು 33 ಕೋಟಿ ಗ್ರಾಹಕರು ಬಳಸುವ ಈ ಸಿಲಿಂಡರ್ ದರ ಯಥಾಸ್ಥಿತಿಯಲ್ಲೇ ಉಳಿದಿದೆ.

ಇದೇ ವೇಳೆ, ವಾಹನ ಸವಾರರಿಗೆ ಮತ್ತೊಂದು ನೆಮ್ಮದಿ ಸುದ್ದಿ. ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಅಡಿಯಲ್ಲಿ ನೀಡುವ ಸೀಮೆಎಣ್ಣೆ ದರವೂ ಸ್ಥಿರವಾಗಿದೆ.

ವಿಮಾನಯಾನ ಕ್ಷೇತ್ರಕ್ಕೂ ರಿಲೀಫ್

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಏರಿಕೆಯಿದ್ದರೂ, ದೇಶೀಯ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗುವ ಎಟಿಎಫ್ (ATF) ದರವನ್ನು ಬದಲಾವಣೆ ಮಾಡದೇ ಉಳಿಸಲಾಗಿದೆ. ಗ್ರಾಹಕರ ಮೇಲೆ ಹೆಚ್ಚುವರಿ ಹೊರೆ ಬಾರದಂತೆ ತೈಲ ಕಂಪನಿಗಳು ಈ ನಿರ್ಧಾರ ಕೈಗೊಂಡಿವೆ. ಆದರೆ, ಅಂತರರಾಷ್ಟ್ರೀಯ ವಿಮಾನಗಳಿಗೆ ಇಂಧನ ದರ ಹೆಚ್ಚಿಸಲಾಗಿದೆ.

ತೈಲ ಮಾರುಕಟ್ಟೆ ಕಂಪನಿಗಳ ಪ್ರಕಾರ, ಮಾರುಕಟ್ಟೆಯಲ್ಲಿರುವ ಸುಮಾರು 80% ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಸುಮಾರು 4% ಉತ್ಪನ್ನಗಳಲ್ಲಿ ಬೆಲೆ ಇಳಿಕೆಯಾಗಿದ್ದು, 16% ಉತ್ಪನ್ನಗಳಲ್ಲಿ (ಮುಖ್ಯವಾಗಿ ಕೈಗಾರಿಕಾ ಬಳಕೆ) ಮಾತ್ರ ಏರಿಕೆ ದಾಖಲಾಗಿದೆ.  ಅಂತರರಾಷ್ಟ್ರೀಯ ಬೆಲೆ ಏರಿಳಿತಗಳ ನಡುವೆಯೂ ದೇಶೀಯ ಗ್ರಾಹಕರಿಗೆ ಭಾರವಾಗದಂತೆ ಮತ್ತು ಆರ್ಥಿಕ ಸ್ಥಿರತೆಯನ್ನು ಕಾಪಾಡಲು ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು Indian Oil Corporation ಸ್ಪಷ್ಟಪಡಿಸಿದೆ.

Author

ANU News

Follow Me
Other Articles
Previous

ಇರಾನ್ ದುರ್ಬಲವಾಗಿದೆ, ಒಪ್ಪಂದಕ್ಕೆ ಮುಂದಾಗಿದೆ ಎಂದ ಟ್ರಂಪ್

Next

ಜಲ ಜೀವನ ಮಿಷನ್ 2.0: ಕೇಂದ್ರ-ರಾಜ್ಯ ಸಹಕಾರ ಒಪ್ಪಂದಕ್ಕೆ ಅಂಕಿತ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • PM-AJAY covers 47,328 villages across India; over 3.28 lakh development works identified
    • Over one crore youth join PM Modi’s anti-drug pledge as ‘Nasha Mukt Yuva’ campaign begins
    • ‘ಮುಂದಿನ 100 ಭಾನುವಾರ ನಶಾ ಮುಕ್ತ ಭಾರತಕ್ಕಾಗಿ’ ರಾಷ್ಟ್ರವ್ಯಾಪಿ ಯುವ ಆಂದೋಲನ; ಪ್ರಧಾನಿ ಮೋದಿ ಕರೆ
    • ಸಂಕಷ್ಟ ಪರಿಹಾರ ಸೂತ್ರ ಜಾರಿಗೊಳಿಸಿ, ರೈತರ ಬೆಳೆಗಳಿಗೆ ಕೂಡಲೇ ನೀರು ಬಿಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
    • K’taka won’t compromise farmers’ interests on Cauvery: DK urges groups to withdraw bandh call
    Copyright 2026 — ANU News. All rights reserved. Blogsy WordPress Theme