Skip to content
ANU News
ANU News
  • Home
  • Home
ANU News
ANU News
  • Home
  • Home
ವಿದೇಶ

ಇರಾನ್ ವಿರುದ್ಧದ ಸಂಘರ್ಷ: ಟ್ರಂಪ್ ಆಡಳಿತಕ್ಕೆ ಸೆನೆಟ್‌ನಿಂದಲೇ ಆಘಾತ

By ANU News
June 24, 2026 1 Min Read
0

ವಾಷಿಂಗ್ಟನ್: ಇರಾನ್ ವಿರುದ್ಧದ ಸಂಘರ್ಷವನ್ನು ಮುಂದುವರೆಸದಂತೆ ತಡೆಯುವ ಮಹತ್ವದ ನಿರ್ಣಯವೊಂದನ್ನು ಅಮೆರಿಕದ ಸಂಸತ್ತಿನ ಮೇಲ್ಮನೆಯಾದ ಸೆನೆಟ್ ಅಂಗೀಕರಿಸಿದೆ. ಈ ನಿರ್ಣಯವು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ಭಾರಿ ರಾಜಕೀಯ ಹಿನ್ನಡೆಯಾಗಿ ಪರಿಣಮಿಸಿದೆ.

ಟ್ರಂಪ್ ಅವರ ಪಕ್ಷವಾದ ರಿಪಬ್ಲಿಕನ್ ಪಕ್ಷವೇ ಸೆನೆಟ್‌ನಲ್ಲಿ ಬಹುಮತ ಹೊಂದಿದ್ದರೂ, ಅವರದೇ ಪಕ್ಷದ ನಾಲ್ವರು ಸೆನೆಟರ್‌ಗಳು ನಿರ್ಣಯಕ್ಕೆ ಬೆಂಬಲ ನೀಡಿ ಟ್ರಂಪ್ ವಿರುದ್ಧ ಮತ ಚಲಾಯಿಸಿದ್ದಾರೆ. ಇದರಿಂದ ಇರಾನ್ ಜತೆಗಿನ ಯುದ್ಧದ ವಿಚಾರದಲ್ಲಿ ಟ್ರಂಪ್‌ಗೆ ಅಸಹಜ ರಾಜಕೀಯ ಆಘಾತ ಎದುರಾಗಿದೆ.

ಸೆನೆಟ್‌ನಲ್ಲಿ ಈ ನಿರ್ಣಯವು 50–48 ಮತಗಳ ಅಲ್ಪ ಅಂತರದಿಂದ ಅಂಗೀಕಾರಗೊಂಡಿದೆ. ಇದಕ್ಕೂ ಮೊದಲು ಅಮೆರಿಕದ ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಇದು 215–208 ಮತಗಳಿಂದ ಪಾಸಾಗಿತ್ತು.

ಆದರೆ, ಸೆನೆಟ್‌ನಲ್ಲಿ ನಿರ್ಣಯ ಅಂಗೀಕಾರವಾದರೂ, ಇದು ಕಾನೂನಾತ್ಮಕವಾಗಿ ಅಧ್ಯಕ್ಷರ ಯುದ್ಧಾಧಿಕಾರವನ್ನು ತಕ್ಷಣಕ್ಕೆ ನಿರ್ಬಂಧಿಸುವುದಿಲ್ಲ. ಪ್ರಸ್ತುತ ಇದು ಟ್ರಂಪ್ ಆಡಳಿತಕ್ಕೆ ರಾಜಕೀಯ ಮುಜುಗರ ಉಂಟುಮಾಡುವ ಕ್ರಮವಾಗಿಯೇ ಉಳಿಯಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಗಮನಾರ್ಹವಾಗಿ, ಅಮೆರಿಕ ಮತ್ತು ಇರಾನ್ ನಡುವೆ ಮೂರು ತಿಂಗಳಿಗೂ ಹೆಚ್ಚು ಕಾಲ ನಡೆದಿದ್ದ ಯುದ್ಧವು ಕಳೆದ ಏಪ್ರಿಲ್ 7ರಂದು ಕದನ ವಿರಾಮದೊಂದಿಗೆ ಅಂತ್ಯಗೊಂಡಿತ್ತು. ಇತ್ತೀಚೆಗಷ್ಟೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಡಿಜಿಟಲ್ ಮೂಲಕ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಆದರೂ, ಇರಾನ್‌ನ ಪರಮಾಣು ಕಾರ್ಯಕ್ರಮದ ಕುರಿತು ಇರುವ ವಿವಾದ ಇನ್ನೂ ಜೀವಂತವಾಗಿದ್ದು, ಮುಂದಿನ ದಿನಗಳಲ್ಲಿ ಅಮೆರಿಕ–ಇರಾನ್ ಸಂಬಂಧಗಳು ಯಾವ ದಿಕ್ಕು ತಾಳಲಿವೆ ಎಂಬುದು ಕಾದು ನೋಡಬೇಕಿದೆ.

Author

ANU News

Follow Me
Other Articles
Previous

‘ನೀಟ್’ ಹಚ್ಚಿದ ಕಿಚ್ಚು; ಕೇಂದ್ರದ ವಿರುದ್ಧ ದೇಶವ್ಯಾಪಿ ‘ಛತ್ರೋಂ ಕಿ ಗೂಂಜ್’ ಅಭಿಯಾನಕ್ಕೆ ಕಾಂಗ್ರೆಸ್ ಮುನ್ನುಡಿ

Next

ಕೇಂದ್ರದಿಂದ ‘ಒಂದು ದೇಶ–ಒಂದು ಪಕ್ಷ’ ರಹಸ್ಯ ತಂತ್ರ; ಮೀನಾಕ್ಷಿ ನಟರಾಜನ್ ಆರೋಪ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Three CMs unite for inauguration of new crest gates at Tungabhadra reservoir
    • ಆಂಧ್ರ-ತೆಲಂಗಾಣ-ಕರ್ನಾಟಕ ಸಿಎಂಗಳ ಒಗ್ಗಟ್ಟಿಗೆ ಸಾಕ್ಷಿಯಾದ ‘ತುಂಗಭದ್ರಾ’
    • ಶತಮಾನ ಕಂಡರಿಯದ ಭೂಕಂಪ; ಸ್ಮಶಾನದಂತಾದ ವೆನೆಜುವೆಲಾ
    • ಫೋಟೋ ತೆಗೆಯುವ ವೇಳೆ ಕಾವೇರಿ ಪಾಲಾದ ಒಂದೇ ಕುಟುಂಬದ ಐವರು
    • ಸೆಪ್ಟೆಂಬರ್ 18-19ರಂದು ರಾಜ್ಯ ಮಟ್ಟದ ಕಾಫಿ ಬೆಳೆಗಾರರ ಬೃಹತ್ ಸಮಾವೇಶ
    Copyright 2026 — ANU News. All rights reserved. Blogsy WordPress Theme