Skip to content
ANU News
ANU News
  • Home
  • Home
ANU News
ANU News
  • Home
  • Home
ಪ್ರಾದೇಶಿಕ

ಹವಾಮಾನ ವೈಪರೀತ್ಯ ತಡೆಗೆ ಲಾವಂಚ ಬೆಳೆ ಪರಿಣಾಮಕಾರಿ: ಅಶೋಕ್ ದಳವಾಯಿ

By ANU News
July 12, 2026 1 Min Read
0

ಬೆಂಗಳೂರು: ಹವಾಮಾನ ವೈಪರೀತ್ಯದ ಪರಿಣಾಮಗಳನ್ನು ತಗ್ಗಿಸಲು ಲಾವಂಚ (ವೆಟಿವರ್) ಬೆಳೆ ಪರಿಣಾಮಕಾರಿ ಅಸ್ತ್ರವಾಗಿದ್ದು, ಇದರ ಕೃಷಿಯಿಂದ ಮಣ್ಣಿನ ಸಾವಯವ ಅಂಶ ಹೆಚ್ಚುವುದರ ಜೊತೆಗೆ ರೈತರಿಗೆ ಆರ್ಥಿಕ ಲಾಭವೂ ದೊರೆಯಲಿದೆ ಎಂದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಅಶೋಕ್ ದಳವಾಯಿ ಹೇಳಿದ್ದಾರೆ.

ನಗರದ ಕ್ವಿನ್ಸ್ ರಸ್ತೆಯ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಭಾರತೀಯ ಲಾವಂಚ ಫೌಂಡೇಷನ್, ಜಲಾನಯ ಇಲಾಖೆ ಹಾಗೂ ಸೀಮ್ಯಾಪ್ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ ಪ್ರಾದೇಶಿಕ ಲಾವಂಚ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ಹವಾಮಾನ ಬದಲಾವಣೆಯ ಹಿನ್ನೆಲೆಯಲ್ಲಿ ಅನುಪಯುಕ್ತ ಭೂಮಿ ಸೇರಿದಂತೆ ಹೆಚ್ಚಿನ ಪ್ರದೇಶಗಳಲ್ಲಿ ಲಾವಂಚ ಬೆಳೆ ಬೆಳೆಸುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಲಾವಂಚದ ಬೇರುಗಳು 2ರಿಂದ 4 ಮೀಟರ್ ಆಳಕ್ಕೆ ಬೆಳೆಯುವ ಮೂಲಕ ನೀರನ್ನು ನೆಲದಾಳಕ್ಕೆ ಇಳಿಸಿ, ಮಣ್ಣಿನ ತೇವಾಂಶ ಕಾಪಾಡುವುದಲ್ಲದೆ, ಮಣ್ಣಿನ ಸವಕಳಿಯನ್ನೂ ತಡೆಯುತ್ತವೆ ಎಂದರು.

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ್ ಮಾತನಾಡಿ, ಲಾವಂಚ ಕಡಿಮೆ ವೆಚ್ಚದಲ್ಲಿ ಬೆಳೆಯಬಹುದಾದ ಬಹುಪಯೋಗಿ ಬೆಳೆ. ಇದರ ತೈಲಕ್ಕೆ ವಿದೇಶಗಳಲ್ಲಿ ಉತ್ತಮ ಬೇಡಿಕೆ ಇದ್ದು, ರೈತರಿಗೆ ಹೆಚ್ಚಿನ ಆದಾಯ ತಂದುಕೊಡಲಿದೆ ಎಂದು ಹೇಳಿದರು. ಮಣ್ಣಿನ ಸಾವಯವ ಇಂಗಾಲ ಹೆಚ್ಚಿಸುವ ಈ ಬೆಳೆಗೆ ತೋಟಗಾರಿಕೆ ವಿಶ್ವವಿದ್ಯಾಲಯದಿಂದ ಪ್ರೋತ್ಸಾಹ ನೀಡಲಾಗುವುದು ಎಂದು ಭರವಸೆ ನೀಡಿದರು.

ಕೃಷಿ ತಂತ್ರಜ್ಞರ ಸಂಸ್ಥೆ ಅಧ್ಯಕ್ಷ ಡಾ. ಎ.ಬಿ. ಪಾಟೀಲ್ ಮಾತನಾಡಿ, ಲಾವಂಚದ ಬೇರುಗಳಿಂದ ಸುಗಂಧ ತೈಲ, ಚಾಪೆ, ಟೋಪಿ, ಹಾರ, ಪೀಠೋಪಕರಣ ಸೇರಿದಂತೆ ಹಲವು ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ನೀರನ್ನು ಶುದ್ಧೀಕರಿಸುವ ಗುಣವೂ ಲಾವಂಚಕ್ಕೆ ಇದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸೀಮ್ಯಾಪ್ ಸಂಸ್ಥೆಯ ಪ್ರಧಾನ ವಿಜ್ಞಾನಿ ಡಾ. ಯೋಗೇಂದ್ರ ಸೇರಿದಂತೆ ಹಲವು ಗಣ್ಯರಿಗೆ “ಕರ್ನಾಟಕ ಲಾವಂಚ ರಾಯಭಾರಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು.

Author

ANU News

Follow Me
Other Articles
Previous

Venezuela Earthquake Death Toll Rises to 4,333; Relief Operations Intensify

Next

ಜಮೀರ್ ಅಹ್ಮದ್ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ ಲೋಕಾಯುಕ್ತ; ‘ಉಪ್ಪು ತಿಂದವರು ನೀರು ಕುಡಿಯಲೇ ಬೇಕು’ ಎಂದ ಬಿಜೆಪಿ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ‘Don’t Expect BJP’s “Ji Huzoor” Culture From Me’: B.K. Hariprasad Hits Back
    • ‘ಜೀ ಹುಜೂರು’ ಸಂಸ್ಕೃತಿ ನನ್ನಿಂದ ನಿರೀಕ್ಷಿಸುವುದು ಮೂರ್ಖತನ’; ಬಿಜೆಪಿ ವಿರುದ್ಧ ಹರಿಪ್ರಸಾದ್ ಟ್ವೀಟಾಸ್ತ್ರ
    • Congress Holds Cycle Rally Over NEET Paper Leak, Demands Dharmendra Pradhan’s Resignation
    • ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದ; ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಯುವ ಕಾಂಗ್ರೆಸ್ ಸೈಕಲ್ ಜಾಥಾ
    • ಕೇಂದ್ರ ಸರ್ಕಾರದ ವಿವಿಧ ಹುದ್ದೆಗಳಿಗೆ UPSC ನೇರ ನೇಮಕಾತಿ; ಜುಲೈ 31ರವರೆಗೆ ಅರ್ಜಿ
    Copyright 2026 — ANU News. All rights reserved. Blogsy WordPress Theme