Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಭ್ರಷ್ಟಾಚಾರದ ತಾಣಗಳಾಗಿ ಮಾರ್ಪಟ್ಟ ಸರ್ಕಾರಿ ಆಸ್ಪತ್ರೆಗಳು..! ಏನಿದು ಖದರ್ ಸಾಹೇಬ್ರೇ?

By ANU News
July 19, 2026 1 Min Read
0

ಬೆಂಗಳೂರು: ಬಡವರಿಗೆ ಆಶಾಕಿರಣವಾಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳು ಕಾಂಗ್ರೆಸ್ ಸರ್ಕಾರದ ದುರಾಡಳಿತದ ನಡುವೆ ಭ್ರಷ್ಟಾಚಾರದ ತಾಣಗಳಾಗಿ ಮಾರ್ಪಟ್ಟಿವೆ ಎಂದು ಬಿಜೆಪಿ ಆರೋಪಿಸಿದೆ.

ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಪಕ್ಷ ಬಿಜೆಪಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ. ಅಫ್ಜಲ್‌ಪುರ ಸರ್ಕಾರಿ ಆಸ್ಪತ್ರೆಯಲ್ಲಿ, ರೋಗಿಗಳಿಗೆ ನೀಡುವ ಹಾಲು, ಮೊಟ್ಟೆ ಮತ್ತು ಊಟದ ಹೆಸರಿನಲ್ಲಿ ಲಕ್ಷಾಂತರ ರೂಪಾಯಿಗಳ ನಕಲಿ ಬಿಲ್‌ಗಳನ್ನು ಸೃಷ್ಟಿಸಲಾಗಿದೆ ಮತ್ತು ಲೂಟಿ ಮಾಡಲಾಗಿದೆ ಎಂದು ಬಿಜೆಪಿ ದೂರಿದೆ.

ಆರೋಗ್ಯ ಸಚಿವ ಯು.ಟಿ.ಖಾದರ್ ಅವರ ಇಲಾಖೆಯಲ್ಲಿ ಬಡ ರೋಗಿಗಳಿಗೆ ಆಹಾರ ಪೂರೈಕೆಯಲ್ಲಿ ಭ್ರಷ್ಟಾಚಾರ ಹೆಚ್ಚುತ್ತಿದೆ ಎಂದು ಬಿಜೆಪಿ ಗಮನಸೆಳೆದಿದೆ. ಇದೇ ವೇಳೆ, ‘ತಾವು ಇನ್ನೂ ಏಕೆ ಮೌನವಾಗಿದ್ದೀರಿ? ಆಸ್ಪತ್ರೆಗಳಲ್ಲಿ ರೋಗಿಗಳ ಆಹಾರಕ್ಕೂ ಭದ್ರತೆ ಇಲ್ಲವೇ? ಲೂಟಿಕೋರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಿ’ ಎಂದು ಬಿಜೆಪಿ ಪಕ್ಷವು ಯು.ಟಿ.ಖಾದರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ.

ಬಡವರ ಪಾಲಿನ ಆಶಾಕಿರಣವಾಗಬೇಕಿದ್ದ ಸರ್ಕಾರಿ ಆಸ್ಪತ್ರೆಗಳು ಲೂಟಿಕೋರ @INCKarnataka ಸರ್ಕಾರದ ದುರಾಡಳಿತದಲ್ಲಿ ಭ್ರಷ್ಟಾಚಾರದ ಅಡ್ಡೆಗಳಾಗಿ ಮಾರ್ಪಟ್ಟಿವೆ.

ಅಫಜಲಪುರ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಕೊಡುವ ಹಾಲು, ಮೊಟ್ಟೆ, ಊಟದ ಹೆಸರಲ್ಲೂ ಲಕ್ಷಾಂತರ ರೂಪಾಯಿಗಳ ಬೋಗಸ್ ಬಿಲ್ ಸೃಷ್ಟಿಸಿ ಲೂಟಿ ಹೊಡೆಯಲಾಗಿದೆ.

ಆರೋಗ್ಯ ಸಚಿವ… pic.twitter.com/G2FApXbR2C

— BJP Karnataka (@BJP4Karnataka) July 18, 2026

Author

ANU News

Follow Me
Other Articles
Previous

ಅಮೆರಿಕ ವೈಮಾನಿಕ ದಾಳಿಯಲ್ಲಿ 50 ಸಾವು; ಟ್ರಂಪ್ ಶಾಂತಿ ಒಪ್ಪಂದ ‘ನಿಷ್ಪ್ರಯೋಜಕ’ ಎಂದ ಇರಾನ್‌

Next

BJP flags ‘fake bills’ at Afzalpur hospital, demands action against those behind alleged food scam

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಜಾಗತಿಕ 6G ನಾಯಕತ್ವದತ್ತ ಭಾರತ; 20ಕ್ಕೂ ಹೆಚ್ಚು ರಾಷ್ಟ್ರಗಳ ‘ಕಾಲ್‌ ಟು ಆಕ್ಷನ್‌’ಗೆ ಬೆಂಬಲ
    • India joins global 6G push, backs call for secure and resilient next-generation networks
    • ನಕಲಿ ಬೀಜ ದಂಧೆಗೆ ಅಂಕುಶ; ಕಠಿಣ ಹೊಸ ಕಾಯ್ದೆ ಜಾರಿಗೆ ಕೇಂದ್ರದ ಚಿಂತನೆ
    • Centre plans tough new seed law; Shivraj Singh Chouhan to consult farmer leaders on September 10
    • ರೈಲ್ವೆ ಮಲ್ಟಿಟ್ರ್ಯಾಕಿಂಗ್‌ಗೆ ₹10,021 ಕೋಟಿ; ಕರ್ನಾಟಕಕ್ಕೆ ಬಂಪರ್, ವೈಟ್‌ಫೀಲ್ಡ್–ಬಂಗಾರಪೇಟೆ ಮತ್ತು ಹೊಸೂರು–ಓಮಲೂರು ಮಾರ್ಗಗಳ ಅಭಿವೃದ್ಧಿ
    Copyright 2026 — ANU News. All rights reserved. Blogsy WordPress Theme