Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ಅರುಣಾಚಲದ 27 ಸ್ಥಳಗಳಿಗೆ ಪ್ರಮಾಣಿತ ಹೆಸರು; ಅಧಿಕೃತ ನಕ್ಷೆಗಳಲ್ಲಿ ಗುರುತಿಸಿದ ಕೇಂದ್ರ

By ANU News
August 8, 2026 1 Min Read
0

ನವದೆಹಲಿ: ಅರುಣಾಚಲ ಪ್ರದೇಶ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಕೇಂದ್ರ ಸರ್ಕಾರ ರಾಜ್ಯದ 27 ಸ್ಥಳಗಳು ಹಾಗೂ ಭೌಗೋಳಿಕ ವೈಶಿಷ್ಟ್ಯಗಳನ್ನು ಸರ್ವೇ ಆಫ್ ಇಂಡಿಯಾದ ಅಧಿಕೃತ ನಕ್ಷೆಗಳಲ್ಲಿ ಪ್ರಮಾಣಿತ ಹೆಸರುಗಳೊಂದಿಗೆ ಗುರುತಿಸಿದೆ.

ಸ್ಥಳಗಳ ನಿಖರ ಗುರುತಿಸುವಿಕೆ, ಅಧಿಕೃತ ನಕ್ಷೆಗಳಲ್ಲಿ ಏಕರೂಪದ ಪ್ರಾತಿನಿಧ್ಯ ಹಾಗೂ ಸಾರ್ವಜನಿಕರಲ್ಲಿ ಅವುಗಳ ಬಗ್ಗೆ ಅರಿವು ಹೆಚ್ಚಿಸುವುದು ಈ ಕ್ರಮದ ಉದ್ದೇಶವಾಗಿದೆ ಎಂದು ಸರ್ಕಾರ ತಿಳಿಸಿದೆ.

ಅಧಿಕೃತವಾಗಿ ಗುರುತಿಸಲಾದ 27 ಸ್ಥಳಗಳ ಪಟ್ಟಿಯಲ್ಲಿ ಲಾಂಗ್ಜು, ಮಜಾ, ಬಿಸಾ, ಬಾರಾ ಕುಂಡುನ್, ಛೋಟಾ ಕುಂಡುನ್, ಧನ್ ಬಾರಿ, ಪ್ರಿತ್ನಗರ, ಬುದ್ಧಮಂದಿರ್, ಜೈರಾಂಪುರ್, ರಾಮನಗರ, ಜಸ್ವಂತ್ ಘರ್, ಸಾಗರ್, ಪದ್ಮಾ, ಜ್ಯೋತಿನಗರ, ಬೈಸಾಖಿ, ಶಿವಾಜಿ ನಗರ, ಸನ್ಪುರ ಹಾಗೂ ಕಮ್ಲಾಂಗ್ ನಗರ ಸೇರಿವೆ.

ಇದರ ಜೊತೆಗೆ ಡ್ಜೋ ಲಾ, ರಿಜಾ ಲಾ, ಪುಕುರ್ ಲಾ ಮತ್ತು ಥಾಗ್ ಲಾ ಸೇರಿದಂತೆ ಹಲವು ಪರ್ವತ ಮಾರ್ಗಗಳನ್ನೂ ಪಟ್ಟಿಗೆ ಸೇರಿಸಲಾಗಿದೆ. ಸಂಭೋ ಸರೋವರ ಹಾಗೂ ಸ್ಮಾರಕವಾಗಿ ವರ್ಗೀಕರಿಸಲಾದ ಶೇರ್-ಎ-ಥಾಪ ಸ್ಮಾರಕವೂ ಅಧಿಕೃತ ನಕ್ಷೆಯಲ್ಲಿ ಸ್ಥಾನ ಪಡೆದಿವೆ.

ಈ 27 ಸ್ಥಳಗಳು ಮತ್ತು ಭೌಗೋಳಿಕ ವೈಶಿಷ್ಟ್ಯಗಳನ್ನು ಅವುಗಳ ಪ್ರಮಾಣಿತ ಹೆಸರು ಹಾಗೂ ಸಂಬಂಧಿತ ವರ್ಗೀಕರಣದೊಂದಿಗೆ ಅರುಣಾಚಲ ಪ್ರದೇಶದ ಸರ್ವೇ ಆಫ್ ಇಂಡಿಯಾ ನಕ್ಷೆಗಳಲ್ಲಿ ಸೇರಿಸಲಾಗಿದೆ.

ಈ ಔಪಚಾರಿಕ ಗುರುತಿಸುವಿಕೆಯಿಂದ ಅಧಿಕೃತ ದಾಖಲೆಗಳು ಹಾಗೂ ನಕ್ಷೆಗಳಲ್ಲಿ ಸ್ಥಳಗಳ ಹೆಸರುಗಳ ಏಕರೂಪತೆ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ. ಜತೆಗೆ, ಸ್ಥಳಗಳ ನಿಖರ ಗುರುತಿಸುವಿಕೆ ಮತ್ತು ಸಾರ್ವಜನಿಕರಲ್ಲಿ ಅವುಗಳ ಕುರಿತು ಜಾಗೃತಿ ಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Author

ANU News

Follow Me
Other Articles
Previous

Centre identifies 27 places, features in Arunachal Pradesh on Survey of India maps

Next

I4C warns corporates of ‘Boss Scam’; malicious WhatsApp files target finance teams

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Power play in Karnataka Council: BJP-JDS allege pressure on Horatti, petition Governor
    • ಸಭಾಪತಿ ರಾಜೀನಾಮೆ ವಿವಾದ; ರಾಜ್ಯಪಾಲರಿಗೆ ಬಿಜೆಪಿ-ಜೆಡಿಎಸ್ ನಿಯೋಗ ದೂರು
    • ಆ.13ರಿಂದ ವಿಧಾನಸಭೆ ಅಧಿವೇಶನ: ಹಂಗಾಮಿ ಸಭಾಧ್ಯಕ್ಷರಾಗಿ ಟಿ.ಬಿ.ಜಯಚಂದ್ರ
    • ಚಂಡಿಪುರ ವೈರಸ್ ಆತಂಕ; 217 ಶಂಕಿತ ಪ್ರಕರಣ, 23 ಸಾವು
    • NICE row: Kumaraswamy accuses Karnataka govt of ignoring farmers’ interests
    Copyright 2026 — ANU News. All rights reserved. Blogsy WordPress Theme