Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ದೇಶ

ತಮಿಳುನಾಡಿನಲ್ಲಿ ಟಿವಿಕೆಗೆ 120 ಶಾಸಕರ ಬೆಂಬಲ; ಭಾನುವಾರ ವಿಜಯ್ ಪ್ರಮಾಣವಚನ ಸಾಧ್ಯತೆ

By ANU News
May 9, 2026 1 Min Read
0

ಚೆನ್ನೈ: ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಇದೀಗ 120 ಶಾಸಕರ ಬೆಂಬಲ ದೊರೆತಿದ್ದು, ತಮಿಳುನಾಡಿನ ರಾಜಕೀಯ ಹೈಡ್ರಾಮಾಕ್ಕೆ ತೆರೆ ಬಿದ್ದಂತಾಗಿದೆ. ಈ ಹಿನ್ನೆಲೆಯಲ್ಲಿ ವಿಜಯ್ ಭಾನುವಾರ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

BREAKING: TVK Chief Vijay calls on Tamil Nadu Governor Rajendra Vishwanath Arlekar at Lok Bhavan.

With support from Congress, CPI, CPI(M), VCK, and IUML, TVK has secured the backing of 121 MLAs and is now set to form the government in Tamil Nadu. pic.twitter.com/EYIPu46pca

— Actor Vijay Team (@ActorVijayTeam) May 9, 2026

ಬೆಂಬಲ ಹೆಚ್ಚಿಸಿದ ಮೈತ್ರಿ ಪಕ್ಷಗಳು

ವಿಜಯ್ ನೇತೃತ್ವದ ಮೈತ್ರಿಗೆ ಈಗಾಗಲೇ 116 ಶಾಸಕರ ಬೆಂಬಲವಿತ್ತು. ಇದರಲ್ಲಿ ಕಾಂಗ್ರೆಸ್‌ನ ಐದು ಶಾಸಕರು ಹಾಗೂ ಎಡಪಂಥೀಯ ಪಕ್ಷಗಳ ನಾಲ್ವರು ಶಾಸಕರು ಸೇರಿದ್ದರು.

ನಂತರ ವಿಡுதಲೈ ಚಿರುತೈಗಳು ಕಚ್ಚಿ (ವಿಸಿಕೆ) ಪಕ್ಷದ ಇಬ್ಬರು ಶಾಸಕರು ಬೆಂಬಲ ಸೂಚಿಸಿದ ಪರಿಣಾಮ ಮೈತ್ರಿಯ ಬಲ 118ಕ್ಕೆ ಏರಿತು. ಇದೀಗ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪಕ್ಷದ ಇಬ್ಬರು ಶಾಸಕರು ಸಹ ಬೆಂಬಲ ನೀಡಿದ್ದು, ಟಿವಿಕೆಯ ಒಟ್ಟು ಬಲ 120ಕ್ಕೆ ತಲುಪಿದೆ.

ರಾಜ್ಯಪಾಲರಿಗೆ ಬೆಂಬಲ ಪತ್ರ

ಈ ಬೆಳವಣಿಗೆಯ ಬಳಿಕ ವಿಜಯ್ ಅವರು ಲೋಕಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ 120 ಶಾಸಕರ ಬೆಂಬಲ ಪತ್ರವನ್ನು ಸಲ್ಲಿಸಿದ್ದಾರೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಿರುವ ವಿಜಯ್ ಅವರಿಗೆ ರಾಜ್ಯಪಾಲರು ಅವಕಾಶ ನೀಡಿದ್ದಾರೆ.

BREAKING: TVK Chief Vijay calls on Tamil Nadu Governor Rajendra Vishwanath Arlekar at Lok Bhavan.

With support from Congress, CPI, CPI(M), VCK, and IUML, TVK has secured the backing of 121 MLAs and is now set to form the government in Tamil Nadu. pic.twitter.com/EYIPu46pca

— Actor Vijay Team (@ActorVijayTeam) May 9, 2026

ಭಾನುವಾರ ಮಧ್ಯಾಹ್ನ 3 ಗಂಟೆಗೆ ಚೆನ್ನೈನಲ್ಲಿ ನಡೆಯುವ ಸಮಾರಂಭದಲ್ಲಿ ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Author

ANU News

Follow Me
Other Articles
Previous

ಕುಣಿಗಲ್ ಬಳಿ ಭೀಕರ ರಸ್ತೆ ಅಪಘಾತ: ವಿವಾಹ ವಾರ್ಷಿಕೋತ್ಸವದ ದಿನವೇ ನಾಲ್ವರು ದುರ್ಮರಣ

Next

ಇದೀಗ ನೇರಳೆ ಹಣ್ಣಿನ ಸೀಸನ್; ಆರೋಗ್ಯಕ್ಕೆ ಎಷ್ಟು ಉಪಕಾರಿ ಈ ಜಾಮೂನ್?

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Western Ghats draft: MLA Gantihole flags livelihood concerns over ESA boundaries
    • ಪಶ್ಚಿಮ ಘಟ್ಟದ 7ನೇ ಕರಡು ಅಧಿಸೂಚನೆ: ಅಧಿವೇಶನದಲ್ಲಿ ಗಂಟಿಹೊಳೆ ಪ್ರಶ್ನೆ; ಗ್ರಾಮಗಳ ಭೌತಿಕ ಸರ್ವೇಗೆ ಆಗ್ರಹ
    • HC relief for B Nagendra; allowed to travel across India
    • ಬಿ. ನಾಗೇಂದ್ರಗೆ ಹೈಕೋರ್ಟ್‌ ರಿಲೀಫ್: ದೇಶದೊಳಗೆ ಮುಕ್ತ ಸಂಚಾರಕ್ಕೆ ಗ್ರೀನ್ ಸಿಗ್ನಲ್
    • Southern states’ political voice must be protected, says CM DK Shivakumar
    Copyright 2026 — ANU News. All rights reserved. Blogsy WordPress Theme