Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ವಿದೇಶ

ದೋಹಾದಲ್ಲಿ ಕರ್ನಾಟಕ ಸಂಘದಿಂದ ಭವ್ಯ ಕಾರ್ಮಿಕ ದಿನಾಚರಣೆ; ‘ಕಾಯಕವೇ ಕೈಲಾಸ’ ಸಂದೇಶ

By ANU News
May 4, 2026 1 Min Read
0

ದೋಹಾ (ಕತಾರ್): ಕರ್ನಾಟಕ ಸಂಘ ಕತಾರ್ ವತಿಯಿಂದ “ಕಾರ್ಮಿಕ ದಿನಾಚರಣೆ 2026”ನ್ನು ದೋಹಾದ ಪರ್ಲಿಂಗ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಭರ್ಜರಿಯಾಗಿ ಆಚರಿಸಲಾಯಿತು. Indian Cultural Centre ಹಾಗೂ Embassy of India, Doha ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮ “ಕಾಯಕವೇ ಕೈಲಾಸ” ಎಂಬ ಘೋಷವಾಕ್ಯದೊಂದಿಗೆ ಕಾರ್ಮಿಕರ ಮಹತ್ವವನ್ನು ಎತ್ತಿಹಿಡಿದಿತು.

ಇದು ಸಂಘದ ನೂತನ ಆಡಳಿತ ಸಮಿತಿಯ ಮೊದಲ ಕಾರ್ಯಕ್ರಮವಾಗಿದ್ದು, ಸಮುದಾಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಅಧ್ಯಕ್ಷ ಸುಬ್ರಮಣ್ಯ ಹೆಬ್ಬಗಿಲು ತಮ್ಮ ಭಾಷಣದಲ್ಲಿ “ಕಾರ್ಮಿಕರಿಗೆ ಕರ್ನಾಟಕ ಸಂಘವು ಸ್ವಗೃಹದಂತಿದೆ” ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಡಾ. ವೈಭವ್ ತಾಂಡಲೆ, ಖಾಲಿದ್ ಅಬ್ದುಲ್ ರಹ್ಮಾನ್ ಫಖ್ರೂ, ಮಣಿಕಂಟನ್ ಎ.ಪಿ., ಪಿ.ಎನ್. ಬಾಬುರಾಜನ್ ಹಾಗೂ ಫೈಸಲ್ ಅಲ್ ಹುಡಾವಿ ಉಪಸ್ಥಿತರಿದ್ದು, ಕಾರ್ಮಿಕರ ಕೊಡುಗೆ, ಸುರಕ್ಷತೆ ಹಾಗೂ ಕಲ್ಯಾಣದ ಮಹತ್ವವನ್ನು ಒತ್ತಿಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಮುಖಂಡರು, ಸಲಹಾ ಸಮಿತಿ ಸದಸ್ಯರು ಹಾಗೂ ಕನ್ನಡಿಗರ ಪ್ರತಿನಿಧಿಗಳು ಭಾಗವಹಿಸಿ ಒಗ್ಗಟ್ಟಿನ ಸಂದೇಶ ನೀಡಿದರು. ಕಾರ್ಮಿಕರಿಗೆ ICBF ಜೀವವಿಮೆ ಸೌಲಭ್ಯ ವಿತರಿಸುವ ಜೊತೆಗೆ, ಬೇಸಿಗೆಯನ್ನು ಗಮನದಲ್ಲಿಟ್ಟುಕೊಂಡು ಕೂಲರ್ ಬಾಟಲ್‌ಗಳನ್ನು ನೀಡಲಾಯಿತು.

ಸಾಂಸ್ಕೃತಿಕ ಕಾರ್ಯಕ್ರಮಗಳು ಕಾರ್ಮಿಕರಿಗೆ ಮನೋರಂಜನೆ ನೀಡಿದವು. ಡಾ. ಕಾಂತರಾಜ್ ಆರೋಗ್ಯ ಜಾಗೃತಿ ಮೂಡಿಸಿದರು. ಪ್ರಧಾನ ಕಾರ್ಯದರ್ಶಿ ಸುಜಿತ್ ಕುಮಾರ್ ಧನ್ಯವಾದ ಅರ್ಪಿಸಿದರು.

Author

ANU News

Follow Me
Other Articles
Previous

iOS 27: ಸಿರಿ, ಕ್ಯಾಮೆರಾ, AI ಫೀಚರ್‌ಗಳಲ್ಲಿ ದೊಡ್ಡ ಬದಲಾವಣೆ, WWDC ನಲ್ಲಿ ಭರ್ಜರಿ ಘೋಷಣೆ ನಿರೀಕ್ಷೆ

Next

ಮುಂಚಿತ ಮುಂಗಾರು ಮಳೆ ಸುಳಿವು; ಈ ತಿಂಗಳಲ್ಲೇ ಕರಾವಳಿ ಪ್ರವೇಶಿಸಲಿರುವ ವರುಣ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Western Ghats draft: MLA Gantihole flags livelihood concerns over ESA boundaries
    • ಪಶ್ಚಿಮ ಘಟ್ಟದ 7ನೇ ಕರಡು ಅಧಿಸೂಚನೆ: ಅಧಿವೇಶನದಲ್ಲಿ ಗಂಟಿಹೊಳೆ ಪ್ರಶ್ನೆ; ಗ್ರಾಮಗಳ ಭೌತಿಕ ಸರ್ವೇಗೆ ಆಗ್ರಹ
    • HC relief for B Nagendra; allowed to travel across India
    • ಬಿ. ನಾಗೇಂದ್ರಗೆ ಹೈಕೋರ್ಟ್‌ ರಿಲೀಫ್: ದೇಶದೊಳಗೆ ಮುಕ್ತ ಸಂಚಾರಕ್ಕೆ ಗ್ರೀನ್ ಸಿಗ್ನಲ್
    • Southern states’ political voice must be protected, says CM DK Shivakumar
    Copyright 2026 — ANU News. All rights reserved. Blogsy WordPress Theme