Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ಸಚಿವ ಸಂಪುಟ ವಿಸ್ತರಣೆ ವಿಳಂಬ: ಬಿಜೆಪಿ ಗೇಲಿ, BSY ಸರ್ಕಾರವನ್ನು ನೆನಪಿಸಿದ ಕಾಂಗ್ರೆಸ್

By Anu News
June 14, 2026 1 Min Read
0

ಬೆಂಗಳೂರು: ರಾಜ್ಯ ಸಚಿವ ಸಂಪುಟದ ಖಾತೆ ಹಂಚಿಕೆ ಮತ್ತು ಸಚಿವರ ನೇಮಕಾತಿ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಾಮಾಜಿಕ ಮಾಧ್ಯಮ X ನಲ್ಲಿ ವಾಕ್ಸಮರ ನಡೆದಿದೆ.

ರಾಜ್ಯದ 20 ಇಲಾಖೆಗಳಿಗೆ ಇನ್ನೂ ಸಚಿವರನ್ನು ನೇಮಕ ಮಾಡಿಲ್ಲ ಎಂದು ಆರೋಪಿಸಿರುವ ಬಿಜೆಪಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಆಡಳಿತ ಯಂತ್ರ ಸ್ಥಗಿತಗೊಂಡಿದ್ದು, ಜನರ ಕೆಲಸಗಳು ವಿಳಂಬವಾಗುತ್ತಿವೆ ಎಂದು ಟೀಕಿಸಿದೆ.

“20 ಇಲಾಖೆಗಳಿಗೆ ಇನ್ನೂ ಸಚಿವರಿಲ್ಲ. ಈಗಾಗಲೇ ಪ್ರಮಾಣ ವಚನ ಸ್ವೀಕರಿಸಿರುವ ಕೆಲ ಸಚಿವರೂ ಅತೃಪ್ತರಾಗಿದ್ದಾರೆ. ಕರ್ನಾಟಕ ಕಾಂಗ್ರೆಸ್‌ನ ಆಂತರಿಕ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಉಳಿದ ಖಾತೆಗಳ ಹಂಚಿಕೆಗೆ ಯಾವಾಗ ದಿನಾಂಕ ನಿಗದಿಪಡಿಸುತ್ತೀರಿ?” ಎಂದು ಬಿಜೆಪಿ ಪ್ರಶ್ನಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಹಿಂದಿನ ಬಿಜೆಪಿ ಸರ್ಕಾರಗಳ ಉದಾಹರಣೆಗಳನ್ನು ಉಲ್ಲೇಖಿಸಿ ತಿರುಗೇಟು ನೀಡಿದೆ.

“2019ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಒಂದು ತಿಂಗಳ ಕಾಲ ಏಕಸದಸ್ಯ ಸಚಿವ ಸಂಪುಟವೇ ಇತ್ತು. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದಾಗಲೂ ಮೊದಲಿಗೆ ಅವರೊಬ್ಬರೇ ಪ್ರಮಾಣ ವಚನ ಸ್ವೀಕರಿಸಿದ್ದರು; ಬಳಿಕ ಒಂದು ವಾರದ ನಂತರ ಸಚಿವರ ನೇಮಕವಾಗಿತ್ತು. 2023ರಲ್ಲಿ ಬಿಜೆಪಿ ಆರು ತಿಂಗಳ ಕಾಲ ವಿರೋಧ ಪಕ್ಷದ ನಾಯಕರನ್ನೇ ನೇಮಕ ಮಾಡಿರಲಿಲ್ಲ,” ಎಂದು ಕಾಂಗ್ರೆಸ್ ಹೇಳಿದೆ.

* 2019ರಲ್ಲಿ ಯಡಿಯೂರಪ್ಪ ಅವರು ಸಿಎಂ ಆದಾಗ ಒಂದು ತಿಂಗಳು ಒಬ್ಬ ವ್ಯಕ್ತಿಯ ಸಂಪುಟವಿತ್ತು.

* ಬಸವರಾಜ ಬೊಮ್ಮಾಯಿ ಅವರು ಸಿಎಂ ಆದಾಗ ಅವರ ಹೊರತಾಗಿ ಬೇರೆ ಯಾರೂ ಪ್ರಮಾಣ ವಚನ ಸ್ವೀಕರಿಸಲಿಲ್ಲ. ಒಂದು ವಾರದ ನಂತರ ಸಚಿವರು ಪ್ರಮಾಣ ವಚನ ಸ್ವೀಕರಿಸಿದರು.

* 2023ರಲ್ಲಿ ಆರು ತಿಂಗಳ ಕಾಲ ವಿರೋಧ ಪಕ್ಷದ ನಾಯಕರಿರಲಿಲ್ಲ.

ಇಂತಹ ಅಸಮರ್ಥ… https://t.co/TABXjgLygC

— Karnataka Congress (@INCKarnataka) June 14, 2026

“ಇಂತಹ ಆಡಳಿತ ನಡೆಸಿದ ಬಿಜೆಪಿಗೆ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕಿಲ್ಲ” ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ.

ಈ ಮೂಲಕ ಸಚಿವ ಸಂಪುಟ ವಿಸ್ತರಣೆ ಮತ್ತು ಆಡಳಿತ ಕಾರ್ಯಕ್ಷಮತೆ ಕುರಿತ ರಾಜಕೀಯ ಚರ್ಚೆ ರಾಜ್ಯದಲ್ಲಿ ಮತ್ತಷ್ಟು ತೀವ್ರಗೊಂಡಿದೆ.

Author

Anu News

Follow Me
Other Articles
Previous

ಟ್ರಂಪ್ ಅಮೆರಿಕ-ಇರಾನ್ ಶಾಂತಿ ಒಪ್ಪಂದ ಘೋಷಣೆ; ಹಾರ್ಮುಜ್ ಜಲಸಂಧಿ ತೆರೆಯುವ ಭರವಸೆ

Next

ಕೇಂದ್ರ ಸರ್ಕಾರಿ ಹುದ್ದೆಗಳಿಗೆ ನೇರ ನೇಮಕಾತಿಗೆ UPSC ಅರ್ಜಿ ಆಹ್ವಾನ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • Indian Railways approves ₹220-crore traction upgrade on Wadi–Raichur section
    • Centre says E20 implementation followed rigorous testing and stakeholder consultations
    • SSC, UPSC ನೇಮಕಾತಿಯಲ್ಲಿ ತಂತ್ರಜ್ಞಾನ ಆಧಾರಿತ ಸುಧಾರಣೆ; ಪ್ರಕ್ರಿಯೆಗೆ ವೇಗ, ಪಾರದರ್ಶಕತೆಗೆ ಆದ್ಯತೆ
    • Over 24.29 lakh artisans receive skill training under PM Vishwakarma Scheme
    • E20 ಇಂಧನ ಸುರಕ್ಷಿತ; ಎಂಜಿನ್ ಹಾನಿಗೆ ಯಾವುದೇ ಪುರಾವೆಗಳಿಲ್ಲ: ಕೇಂದ್ರ
    Copyright 2026 — ANU News. All rights reserved. Blogsy WordPress Theme