Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

ಹೆಣ್ಣೊಬ್ಬಳ ವಿಚಿತ್ರ ಕಥೆ; ‘ಓ ಸುಕುಮಾರಿ!’ ಟ್ರೇಲರ್ ಬಿಡುಗಡೆ

By ANU News
July 11, 2026 1 Min Read
0

ಹೈದರಾಬಾದ್: ನಿರ್ದೇಶಕ ಭರತ್ ದರ್ಶನ್ ಅವರ ಬಹುನಿರೀಕ್ಷಿತ ತೆಲುಗು ಚಿತ್ರ ‘ಓ ಸುಕುಮಾರಿ!’ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಖ್ಯಾತ ನಿರ್ದೇಶಕ ಅನಿಲ್ ರವಿಪುಡಿ ಸಾಮಾಜಿಕ ಜಾಲತಾಣದಲ್ಲಿ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಟ್ರೇಲರ್‌ನಲ್ಲಿ ದಾಮಿನಿ ಎಂಬ ಯುವತಿಯ ವಿಚಿತ್ರ ಕಥೆಯನ್ನು ಪರಿಚಯಿಸಲಾಗಿದೆ. ಅವಳನ್ನು ಮುಟ್ಟಿದವರಿಗೆ ವಿದ್ಯುತ್ ಶಾಕ್ ಆಗುತ್ತದೆ ಎಂಬ ನಂಬಿಕೆಯಿಂದ ಇಡೀ ಗ್ರಾಮವೇ ಭಯಪಡುತ್ತದೆ. ಈ ರಹಸ್ಯವನ್ನು ಮುಚ್ಚಿಟ್ಟು ನಾಯಕನೊಂದಿಗೆ ಅವಳ ಮದುವೆ ಮಾಡಲಾಗುತ್ತದೆ. ಬಳಿಕ ಈ ಅಸಾಮಾನ್ಯ ಸಮಸ್ಯೆಯಿಂದ ನವದಂಪತಿ ಎದುರಿಸುವ ಹಾಸ್ಯಮಯ ಹಾಗೂ ಅನಿರೀಕ್ಷಿತ ಘಟನೆಗಳು ಚಿತ್ರದ ಪ್ರಮುಖ ಕಥಾಹಂದರವಾಗಿದೆ.

ಅಸಾಮಾನ್ಯ ಕಥಾವಸ್ತುವಿನ ಜೊತೆಗೆ ಭಾವನೆ ಮತ್ತು ಹಾಸ್ಯವನ್ನು ಸಮತೋಲನದಿಂದ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕ ಭರತ್ ದರ್ಶನ್ ಮಾಡಿದ್ದಾರೆ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಚಿತ್ರದಲ್ಲಿ ಐಶು ದಿಲ್ ಮತ್ತು ತಿರುವೀರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ರಜಾಕರ್’ ಹಾಗೂ ‘ಪೊಲಿಮೆರಾ’ ಖ್ಯಾತಿಯ ಸಿಎಚ್ ಕುಶೇಂದರ್ ಛಾಯಾಗ್ರಹಣ ನಿರ್ವಹಿಸಿದ್ದು, ಎಂ.ಎಂ. ಕೀರವಾಣಿ ಅವರ ಸಹಾಯಕ ಭರತ್ ಮಂಚಿರಾಜು ಸಂಗೀತ ಸಂಯೋಜಿಸಿದ್ದಾರೆ. ‘ಬಲಗಂ’ ಖ್ಯಾತಿಯ ತಿರುಮಲ ಎಂ. ತಿರುಪತಿ ಕಲಾ ನಿರ್ದೇಶನ, ಶ್ರೀ ವರಪ್ರಸಾದ್ ಸಂಕಲನ, ಆನು ರೆಡ್ಡಿ ಅಕ್ಕತಿ ವೇಷಭೂಷಣ ವಿನ್ಯಾಸ ಹಾಗೂ ಪೂರ್ಣಾಚಾರಿ ಸಾಹಿತ್ಯ ಚಿತ್ರಕ್ಕಿದೆ. ‘ಓ ಸುಕುಮಾರಿ!’ ಜುಲೈ 17ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Author

ANU News

Follow Me
Other Articles
Previous

ಕಿಶನ್ ದಾಸ್–ಸಂಜನಾ ಅಭಿನಯದ ‘ಸೀ ಯು’ ಫಸ್ಟ್ ಲುಕ್ ಬಿಡುಗಡೆ

Next

A Woman’s Mysterious Story Unfolds; ‘Oh Sukumari!’ Trailer Released

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ಬಹುತ್ವ, ಸಂವಿಧಾನದ ಆಶಯ ಕಾಪಾಡುವಲ್ಲಿ ಶಿಕ್ಷಕರ ಪಾತ್ರ ದೊಡ್ಡದು: ಬಿ.ಕೆ. ಹರಿಪ್ರಸಾದ್
    • ಬೇಡಿಕೆ ಈಡೇರದಿದ್ದರೆ ಹೋರಾಟ ತೀವ್ರ: ಕೇಂದ್ರಕ್ಕೆ ಲಡಾಖ್ ಸಂಘಟನೆಗಳ ಎಚ್ಚರಿಕೆ
    • Ladakh body warns of intensified agitation if Centre fails to make ‘clear progress
    • Civic apathy won’t be tolerated, says Krishna Byre Gowda during surprise Bengaluru inspectio
    • ನಾಗರಿಕ ಸೇವೆಯಲ್ಲಿ ನಿರ್ಲಕ್ಷ್ಯ ಮಾಡಿದ್ರೆ ಕ್ರಮ: ಕೃಷ್ಣ ಬೈರೇಗೌಡ
    Copyright 2026 — ANU News. All rights reserved. Blogsy WordPress Theme