Skip to content
ANU News
ANU News
  • Home
  • Home
ANU News
ANU News
  • Home
  • Home
ದೇಶಮನರಂಜನೆ

ಕೊರಿಯನ್ ಕನಕರಾಜು; ‘ಕಮ್ಸಹಮ್ನಿದಾ’ ಹಾಡಿಗೆ ಸಂಬಂಧಿಸಿದ ಬಿಹೈಂಡ್ ದಿ ಸೀನ್ಸ್

By ANU News
April 25, 2026 1 Min Read
0

ಹೈದರಾಬಾದ್: ನಿರ್ದೇಶಕ ಮೆರ್ಲಪಕ ಗಾಂಧಿ ಅವರ ಬಹುನಿರೀಕ್ಷಿತ ಹಾರರ್-ಕಾಮಿಡಿ ಚಿತ್ರ ಕೊರಿಯನ್ ಕನಕರಾಜು ಮತ್ತೊಮ್ಮೆ ಸುದ್ದಿಯಲ್ಲಿದೆ. ನಟ ವರುಣ್ ತೇಜ್ ಮತ್ತು ರಿತಿಕಾ ನಾಯಕ್ ಅಭಿನಯದ ಈ ಚಿತ್ರದ ಜನಪ್ರಿಯ ಹಾಡು ‘ಕಮ್ಸಹಮ್ನಿದಾ’ಗೆ ಸಂಬಂಧಿಸಿದ ಬಿಹೈಂಡ್ ದಿ ಸೀನ್ಸ್ (BTS) ವಿಡಿಯೋವನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ.

UV Creations ಜೊತೆಗೆ ಚಿತ್ರವನ್ನು ನಿರ್ಮಿಸುತ್ತಿರುವ First Frame Entertainments ಸಂಸ್ಥೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋವನ್ನು ಹಂಚಿಕೊಂಡು, “ಪ್ರತಿಯೊಂದು ಕ್ರೇಜಿ ವೈಬ್ ಹಾಡಿನ ಹಿಂದೆ ಇನ್ನೂ ಕ್ರೇಜಿಯರ್ ಮೇಕಿಂಗ್ ಇದೆ” ಎಂದು ಹೇಳಿದೆ.

ಈ ಹಾಡು ಥಮನ್ ಎಸ್ ಅವರ ಸಂಗೀತದಲ್ಲಿ ಮೂಡಿಬಂದಿದ್ದು, ಏಪ್ರಿಲ್ 11ರಂದು ಬಿಡುಗಡೆಯಾಗಿತ್ತು. ‘ಕಮ್ಸಹಮ್ನಿದಾ’ ಎಂಬ ಕೊರಿಯನ್ ಪದದ ಅರ್ಥ ‘ಧನ್ಯವಾದಗಳು’ ಎಂಬುದಾಗಿದ್ದು, ಇದೇ ಪದದಿಂದ ಆರಂಭವಾಗುವ ಹಾಡು, ನಾಯಕ-ನಾಯಕಿಯ ನಡುವಿನ ಪ್ರಣಯವನ್ನು ಸೊಗಸಾಗಿ ಕಟ್ಟಿಕೊಡುತ್ತದೆ. ಸಿದ್ ಶ್ರೀರಾಮ್ ಅವರ ಮೃದುವಾದ ಗಾಯನ ಹಾಡಿಗೆ ಹೆಚ್ಚುವರಿ ಮೆರಗು ನೀಡಿದೆ.

ಚಿತ್ರದಲ್ಲಿ ವರುಣ್ ತೇಜ್ ಮತ್ತು ರಿತಿಕಾ ನಾಯಕ್ ಜೋಡಿ ಹೊಸತನದಿಂದ ಕಂಗೊಳಿಸುತ್ತಿದ್ದು, ಉತ್ಸಾಹಭರಿತ ಸಂಗೀತ ಮತ್ತು ನೃತ್ಯ ಸಂಯೋಜನೆ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸುವ ನಿರೀಕ್ಷೆಯಿದೆ.

ಚಿತ್ರದ ಅಂತಿಮ ಹಂತದ ಚಿತ್ರೀಕರಣವನ್ನು ದಕ್ಷಿಣ ಕೊರಿಯಾದಲ್ಲಿ ನಡೆಸಲಾಗಿದ್ದು, ಪ್ರಮುಖ ದೃಶ್ಯಗಳು ಮತ್ತು ಹಾಡುಗಳನ್ನು ಅಲ್ಲಿನ ವಿಭಿನ್ನ ಸ್ಥಳಗಳಲ್ಲಿ ಸೆರೆಹಿಡಿಯಲಾಗಿದೆ. ಭರ್ಜರಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರವು ಭಾರತೀಯ ಮತ್ತು ಕೊರಿಯನ್ ಹಿನ್ನೆಲೆಗಳನ್ನು ಸಂಯೋಜಿಸಿ ಹಾರರ್ ಮತ್ತು ಹಾಸ್ಯವನ್ನು ಹೊಸ ಶೈಲಿಯಲ್ಲಿ ಪ್ರೇಕ್ಷಕರಿಗೆ ನೀಡಲಿದೆ.

ಚಿತ್ರದ ಟೀಸರ್ ಈಗಾಗಲೇ ಸಂಚಲನ ಸೃಷ್ಟಿಸಿದ್ದು, ವರುಣ್ ತೇಜ್ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಹೆಚ್ಚಿಸಿದೆ. ಛಾಯಾಗ್ರಹಣವನ್ನು ಮನೋಜ್ ರೆಡ್ಡಿ ಕಟಾಸಾನಿ ನಿರ್ವಹಿಸಿದ್ದು, ಸಂಕಲನವನ್ನು ಸತ್ಯ ಜಿ ಮಾಡಿದ್ದಾರೆ.

Author

ANU News

Follow Me
Other Articles
Previous

ಮೂರು ವಿಭಿನ್ನ ಲೋಕ; ಸ್ವಯಂಭು’ ಭರ್ಜರಿ ಸೆಟ್‌

Next

ಬಹುನಿರೀಕ್ಷಿತ ಚಿತ್ರ ದೃಶ್ಯಂ 3ಗೆ ಭರ್ಜರಿ ಹೂಡಿಕೆ

No Comment! Be the first one.

Leave a Reply Cancel reply

Your email address will not be published. Required fields are marked *

Recent Posts

  • IOS SAGAR ಕಾರ್ಯಾಚರಣೆ ಯಶಸ್ವಿ; ಕೊಚ್ಚಿಗೆ ಮರಳಿದ ಐಎನ್‌ಎಸ್ ಸುನಯನ
  • (no title)
  • ಭಾರತ-ಇಟಲಿ ನಡುವೆ ‘ವಿಶೇಷ ಕಾರ್ಯತಂತ್ರದ ಪಾಲುದಾರಿಕೆ’ ಘೋಷಣೆ
  • ಜೂನ್ 1ರಂದು ಶಿವಮೊಗ್ಗದಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಯೋಜನೆಗೆ ಚಾಲನೆ
  • ಹಣದುಬ್ಬರ, ನಿರುದ್ಯೋಗ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ
Copyright 2026 — ANU News. All rights reserved. Blogsy WordPress Theme