Skip to content
ANU News
ANU News
  • Home
  • Home
ANU News
ANU News
  • Home
  • Home
ಪ್ರಾದೇಶಿಕ

ವಿಜಯಪುರ ಬಳಿ ಭೀಕರ ಅಪಘಾತ; ತಾಯಿ, ಇಬ್ಬರು ಪುತ್ರರು ಸ್ಥಳದಲ್ಲೇ ಸಾವು

By ANU News
July 11, 2026 1 Min Read
0

ವಿಜಯಪುರ: ನಿಯಂತ್ರಣ ತಪ್ಪಿದ ಕಾರು ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಮತ್ತು ಇಬ್ಬರು ಪುತ್ರರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ-50ರಲ್ಲಿ ನಡೆದಿದೆ.

ಮೃತರನ್ನು ಸತ್ಯವೇಣಿ (38) ಹಾಗೂ ಅವರ ಪುತ್ರರಾದ ಹರಿವೆಂಕಟರಾಮ್ (20) ಮತ್ತು ಜಶ್ವಂತ್ (18) ಎಂದು ಗುರುತಿಸಲಾಗಿದೆ.

ಕೊಪ್ಪಳ ಜಿಲ್ಲೆಯ ಕಾರಟಗಿಯಿಂದ ಶಿರಡಿಗೆ ತೆರಳುತ್ತಿದ್ದ ವೇಳೆ ಶುಕ್ರವಾರ ಈ ಅಪಘಾತ ಸಂಭವಿಸಿದೆ. ಕಾರನ್ನು 20 ವರ್ಷದ ಹರಿವೆಂಕಟರಾಮ್ ಚಲಾಯಿಸುತ್ತಿದ್ದು, ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ದುರ್ಘಟನೆ ನಡೆದಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಮನಗೂಳಿ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತಕ್ಕೆ ನಿಖರ ಕಾರಣ ತಿಳಿಯಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Author

ANU News

Follow Me
Other Articles
Previous

BJP, JD(S) to Form Coordination Committee in Karnataka Ahead of By-Elections

Next

Mother, Two Sons Killed in Road Accident Near Vijayapura, Karnataka

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ನವರಾತ್ರಿ ವೈಭವ; ಮೈಸೂರು ದಸರಾ ತಯಾರಿ ಪ್ರಕ್ರಿಯೆಗೆ ಮುನ್ನುಡಿ
    • Trump Says Ceasefire Over, But US-Iran Talks to Continue
    • ಕದನ ವಿರಾಮ ಅಂತ್ಯ, ಆದರೂ ಇರಾನ್ ಜೊತೆ ಮಾತುಕತೆ ಮುಂದುವರಿಕೆ: ಟ್ರಂಪ್
    • A Woman’s Mysterious Story Unfolds; ‘Oh Sukumari!’ Trailer Released
    • ಹೆಣ್ಣೊಬ್ಬಳ ವಿಚಿತ್ರ ಕಥೆ; ‘ಓ ಸುಕುಮಾರಿ!’ ಟ್ರೇಲರ್ ಬಿಡುಗಡೆ
    Copyright 2026 — ANU News. All rights reserved. Blogsy WordPress Theme