Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಸಿನಿಮಾ

ಬಹುನಿರೀಕ್ಷಿತ ಚಿತ್ರ ದೃಶ್ಯಂ 3ಗೆ ಭರ್ಜರಿ ಹೂಡಿಕೆ

By ANU News
April 25, 2026 1 Min Read
0

ಚೆನ್ನೈ: ಮಲಯಾಳಂ ಸಿನಿರಂಗದ ಬಹುನಿರೀಕ್ಷಿತ ಚಿತ್ರ ದೃಶ್ಯಂ 3ಗೆ ಭರ್ಜರಿ ಹೂಡಿಕೆ ಹರಿದುಬರುತ್ತಿದೆ. ಜನಪ್ರಿಯ ನಿರ್ಮಾಣ ಸಂಸ್ಥೆ Pen Studios, ಈ ಚಿತ್ರಕ್ಕಾಗಿ ₹100 ಕೋಟಿ ಹೂಡಿಕೆ ಮಾಡುವುದಾಗಿ ಘೋಷಿಸಿದೆ.

ನಿರ್ದೇಶಕ ಜೀತು ಜೋಸೆಫ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ಮಲಯಾಳಂ ಸೂಪರ್‌ಸ್ಟಾರ್ ಮೋಹನ್ ಲಾಲ್ ನಾಯಕನಾಗಿ ನಟಿಸುತ್ತಿದ್ದಾರೆ. ಚಿತ್ರವನ್ನು ನಿರ್ಮಿಸುತ್ತಿರುವ Aashirvad Cinemas ಸಂಸ್ಥೆಯಲ್ಲಿ, Panorama Studios ಮೂಲಕ ಈ ಹೂಡಿಕೆ ಮಾಡಲಾಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಣೆ ನೀಡಿರುವ Pen Studios, “ಭಾರತದ ಅತ್ಯಂತ ಪ್ರತಿಷ್ಠಿತ ಥ್ರಿಲ್ಲರ್‌ಗಳಲ್ಲಿ ಒಂದಾದ ‘ದೃಶ್ಯಂ 3’ಗೆ ₹100 ಕೋಟಿ ಹೂಡಿಕೆ” ಎಂದು ತಿಳಿಸಿದೆ. ಜೊತೆಗೆ, ಚಿತ್ರದ ಹೊಸ ಬಿಡುಗಡೆ ದಿನಾಂಕವನ್ನು ಮೇ 21 ಎಂದು ಘೋಷಿಸಿದೆ.

ಮುಂಬರುವ ಚಿತ್ರವು ಮೊದಲು ಏಪ್ರಿಲ್ 2ರಂದು ಬಿಡುಗಡೆಯಾಗಬೇಕಾಗಿದ್ದರೂ, ಪರಿಸ್ಥಿತಿಗಳ ಹಿನ್ನೆಲೆ ಬಿಡುಗಡೆ ಮುಂದೂಡಲಾಗಿದೆ. ಈಗ ಮೇ 21ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

‘ದೃಶ್ಯಂ’ ಸರಣಿಯ ಮೂರನೇ ಭಾಗವಾಗಿರುವ ಈ ಚಿತ್ರವು, ಜಾರ್ಜ್ ಕುಟ್ಟಿ ಅವರ ಜೀವನದ ಮುಂದಿನ ಅಧ್ಯಾಯವನ್ನು ಅನಾವರಣಗೊಳಿಸುತ್ತದೆ. ಸುಮಾರು ನಾಲ್ಕೂವರೆ ವರ್ಷಗಳ ನಂತರ ಅವರ ಜೀವನದಲ್ಲಿ ಏನಾಗುತ್ತದೆ ಎಂಬುದೇ ಕಥೆಯ ತಿರುಳು ಎಂದು ನಿರ್ದೇಶಕ ಜೀತು ಜೋಸೆಫ್ ತಿಳಿಸಿದ್ದಾರೆ.

ಚಿತ್ರದ ನಿರ್ಮಾಪಕ ಆಂಥೋನಿ ಪೆರುಂಬವೂರ್, ಮೊದಲ ಎರಡು ಭಾಗಗಳಿಗೆ ದೊರೆತ ಭರ್ಜರಿ ಪ್ರತಿಕ್ರಿಯೆಯೇ ಮೂರನೇ ಭಾಗವನ್ನು ತರುವ ನಿರ್ಧಾರಕ್ಕೆ ಕಾರಣ ಎಂದು ಹೇಳಿದ್ದಾರೆ.

ಚಿತ್ರದ ಚಿತ್ರೀಕರಣವನ್ನು ತೋಡುಪುಳ, ವಾಗಮೋನ್ ಮತ್ತು ಎರ್ನಾಕುಲಂ ಸೇರಿದಂತೆ ಹಲವು ಸ್ಥಳಗಳಲ್ಲಿ ನಡೆಸಲಾಗಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಮೋಹನ್ ಲಾಲ್ ತಮ್ಮ ಭಾಗದ ಚಿತ್ರೀಕರಣವನ್ನು ಪೂರ್ಣಗೊಳಿಸಿದ್ದರು.

2013ರಲ್ಲಿ ಬಿಡುಗಡೆಯಾದ ಮೊದಲ ‘ದೃಶ್ಯಂ’ ಚಿತ್ರವು ಭಾರತೀಯ ಸಿನಿರಂಗದಲ್ಲಿ ಹೊಸ ಮೈಲುಗಲ್ಲು ನಿರ್ಮಿಸಿತ್ತು. 2021ರಲ್ಲಿ ಬಿಡುಗಡೆಯಾದ ಅದರ ಎರಡನೇ ಭಾಗವೂ ಅಪಾರ ಯಶಸ್ಸು ಕಂಡಿದ್ದು, ಈ ಮೂರನೇ ಭಾಗದ ಮೇಲೆ ಪ್ರೇಕ್ಷಕರ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ.

Author

ANU News

Follow Me
Other Articles
Previous

ಕೊರಿಯನ್ ಕನಕರಾಜು; ‘ಕಮ್ಸಹಮ್ನಿದಾ’ ಹಾಡಿಗೆ ಸಂಬಂಧಿಸಿದ ಬಿಹೈಂಡ್ ದಿ ಸೀನ್ಸ್

Next

2028ರೊಳಗೆ ಗಗನಯಾತ್ರಿಗಳನ್ನು ಚಂದ್ರನ ಮೇಲ್ಮೈಗೆ ಇಳಿಸುವುದು ಪ್ರಮುಖ ಗುರಿ; NASA

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • PM-AJAY covers 47,328 villages across India; over 3.28 lakh development works identified
    • Over one crore youth join PM Modi’s anti-drug pledge as ‘Nasha Mukt Yuva’ campaign begins
    • ‘ಮುಂದಿನ 100 ಭಾನುವಾರ ನಶಾ ಮುಕ್ತ ಭಾರತಕ್ಕಾಗಿ’ ರಾಷ್ಟ್ರವ್ಯಾಪಿ ಯುವ ಆಂದೋಲನ; ಪ್ರಧಾನಿ ಮೋದಿ ಕರೆ
    • ಸಂಕಷ್ಟ ಪರಿಹಾರ ಸೂತ್ರ ಜಾರಿಗೊಳಿಸಿ, ರೈತರ ಬೆಳೆಗಳಿಗೆ ಕೂಡಲೇ ನೀರು ಬಿಡಿ: ಸರ್ಕಾರಕ್ಕೆ ಸಿದ್ದರಾಮಯ್ಯ ಆಗ್ರಹ
    • K’taka won’t compromise farmers’ interests on Cauvery: DK urges groups to withdraw bandh call
    Copyright 2026 — ANU News. All rights reserved. Blogsy WordPress Theme