Skip to content
ANU News ANU News
ANU News ANU News
  • Home
  • Home
ANU News ANU News
ANU News ANU News
  • Home
  • Home
ಪ್ರಾದೇಶಿಕ

ನೀಟ್ Vs ಕೆಪಿಎಸ್ಸ್ಸಿ; ಕರ್ನಾಟಕದಲ್ಲಿ ‘ಹುದ್ದೆಗಳು ಮಾರಾಟಕ್ಕಿವೆ’ ಎಂದ ಅಶೋಕ್ ಗೆ ಹಿಂದಿನ ಸರ್ಕಾರದ PSI ಹಗರಣ ನೆನಪಿಸಿದ ಕಾಂಗ್ರೆಸ್

By ANU News
July 24, 2026 1 Min Read
0

ಬೆಂಗಳೂರು: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ, ಕರ್ನಾಟಕದಲ್ಲಿ ಕೆಪಿಎಸ್‌ಸಿ ನೇಮಕಾತಿ ಅಕ್ರಮದ ಆರೋಪವನ್ನು ಮುಂದಿಟ್ಟುಕೊಂಡು ಬಿಜೆಪಿ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಈ ವಿಚಾರ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಟ್ವೀಟ್ ಸಮರಕ್ಕೆ ಕಾರಣವಾಗಿದೆ.

ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಅವರು, ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ವಿದ್ಯಾರ್ಥಿಗಳ ಪರ ಧ್ವನಿ ಎತ್ತುತ್ತಿದ್ದರೂ, ಕರ್ನಾಟಕದಲ್ಲಿ ಕೆಪಿಎಸ್‌ಸಿ ನೇಮಕಾತಿಯಲ್ಲಿ ಭ್ರಷ್ಟಾಚಾರದ ಗಂಭೀರ ಆರೋಪಗಳ ಬಗ್ಗೆ ಮೌನವಾಗಿದ್ದಾರೆ ಎಂದು ಟೀಕಿಸಿದ್ದಾರೆ. ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿಯಲ್ಲಿ ಹಣದ ವ್ಯವಹಾರ ನಡೆದಿದೆ ಎಂಬ ಆರೋಪದ ಕುರಿತು ಪಾರದರ್ಶಕ ಹಾಗೂ ಕಾಲಮಿತಿಯ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

CASH FOR JOBS!
Has Congress Turned Government Recruitment into an Auction?

Crocodile Tears in Delhi, Silence Over Karnataka’s KPSC Scandal! – Congress’ hypocrisy stands exposed.

To @RahulGandhi and @priyankagandhi, who never miss an opportunity to lecture the nation about youth… https://t.co/GaenWT8KTl

— R. Ashoka (@RAshokaBJP) July 24, 2026

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್, ಬಿಜೆಪಿ ಆಡಳಿತಾವಧಿಯಲ್ಲಿ ನಡೆದ ಪಿಎಸ್‌ಐ ನೇಮಕಾತಿ ಅಕ್ರಮ, ಕೆಪಿಎಸ್‌ಸಿ ಅಧ್ಯಕ್ಷರ ನೇಮಕಾತಿ ಹಾಗೂ ಇತರ ನೇಮಕಾತಿ ವಿವಾದಗಳನ್ನು ಉಲ್ಲೇಖಿಸಿ ತಿರುಗೇಟು ನೀಡಿದೆ. 2021ರ ಪಿಎಸ್‌ಐ ನೇಮಕಾತಿ ಹಗರಣವನ್ನು ಉಲ್ಲೇಖಿಸಿದ ಕಾಂಗ್ರೆಸ್, ಬಿಜೆಪಿ ಆಡಳಿತದ ಅವಧಿಯಲ್ಲೇ ಸರ್ಕಾರಿ ನೇಮಕಾತಿಗಳಲ್ಲಿ ಅಕ್ರಮಗಳು ನಡೆದಿದ್ದವು ಎಂದು ಆರೋಪಿಸಿದೆ.

Dear @RAshokaBJP,

“CASH FOR JOBS!” you thunder. An inspired choice of subject. Few could claim your party’s level of experience.

You’re suddenly worried about KPSC? How moving. Shivashankarappa Sahukar, the Chairman just suspended by the Governor for handing government jobs to… https://t.co/ggLxKkz9rg

— Karnataka Congress (@INCKarnataka) July 24, 2026

ಪಶುವೈದ್ಯಕೀಯ ನೇಮಕಾತಿ ಪ್ರಕರಣದಲ್ಲೂ ಯಾವುದೇ ಆರೋಪಿಯನ್ನು ರಕ್ಷಿಸುವುದಿಲ್ಲ. ತನಿಖೆ ಪಾರದರ್ಶಕ ಮತ್ತು ನಿಷ್ಪಕ್ಷಪಾತವಾಗಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Author

ANU News

Follow Me
Other Articles
Previous

Parliament disrupted over NEET controversy as Opposition intensifies protests

Next

K’taka BJP cites KPSC allegations; Congress counters with PSI recruitment scam claims

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • K’taka BJP cites KPSC allegations; Congress counters with PSI recruitment scam claims
    • ನೀಟ್ Vs ಕೆಪಿಎಸ್ಸ್ಸಿ; ಕರ್ನಾಟಕದಲ್ಲಿ ‘ಹುದ್ದೆಗಳು ಮಾರಾಟಕ್ಕಿವೆ’ ಎಂದ ಅಶೋಕ್ ಗೆ ಹಿಂದಿನ ಸರ್ಕಾರದ PSI ಹಗರಣ ನೆನಪಿಸಿದ ಕಾಂಗ್ರೆಸ್
    • Parliament disrupted over NEET controversy as Opposition intensifies protests
    • ನೀಟ್ ಕೋಲಾಹಲ; ಸಂಸತ್ ನಲ್ಲಿ ‘ಇಂಡಿಯಾ’ ಪ್ರತಿಭಟನೆ
    • US-Iran conflict deepens amid fresh airstrikes, Strait of Hormuz concerns
    Copyright 2026 — ANU News. All rights reserved. Blogsy WordPress Theme