Skip to content
ANU News
ANU News
  • Home
  • Home
ANU News
ANU News
  • Home
  • Home
ದೇಶ

ರಾಮಲಿಂಗಂ ಕೊಲೆ ಪ್ರಕರಣ: ಪಿಎಫ್‌ಐನ ನಾಲ್ವರ ಮಾಜಿ ವಿರುದ್ಧ ಎನ್‌ಐಎ ಆರೋಪಪಟ್ಟಿ

By Anu News
June 7, 2026 1 Min Read
0

ಚೆನ್ನೈ: 2019ರ ರಾಮಲಿಂಗಂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ನಾಲ್ವರು ಮಾಜಿ ಕಾರ್ಯಕರ್ತರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಿಶೇಷ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ.

ಕೆ. ಮೊಹಿದೀನ್, ಮೊಹಮ್ಮದ್ ಇಮ್ರಾನ್, ತಮೀಮ್ ಅನ್ಸಾರಿ ಮತ್ತು ಅಸ್ಮತ್ ವಿರುದ್ಧ, ಪ್ರಕರಣದ ಪ್ರಮುಖ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ತಿರುಭುವನಂನಲ್ಲಿ ನಡೆದ ರಾಮಲಿಂಗಂ ಹತ್ಯೆಯಲ್ಲಿ ಭಾಗಿಯಾಗಿದ್ದ ಆರೋಪಿಗಳಿಗೆ ಉದ್ದೇಶಪೂರ್ವಕವಾಗಿ ನೆರವು ನೀಡಲಾಗಿದೆ ಎಂದು ಎನ್‌ಐಎ ತಿಳಿಸಿದೆ.

2019ರ ಫೆಬ್ರವರಿ 5ರಂದು ಬಲವಂತದ ಧಾರ್ಮಿಕ ಮತಾಂತರವನ್ನು ತಡೆಯಲು ಯತ್ನಿಸಿದ್ದ ವೇಳೆ ರಾಮಲಿಂಗಂ ಅವರನ್ನು ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ತನಿಖೆಯಲ್ಲಿ ಇಬ್ಬರು ಪರಾರಿಯಾಗಿದ್ದ ಆರೋಪಿಗಳಿಗೆ ಸುಮಾರು ಆರು ವರ್ಷಗಳ ಕಾಲ ಆಶ್ರಯ ನೀಡಲಾಗಿತ್ತು ಎಂಬುದು ಬೆಳಕಿಗೆ ಬಂದಿದೆ.

ಈ ಪ್ರಕರಣದಲ್ಲಿ ಇದುವರೆಗೆ 18 ಮಂದಿಯ ವಿರುದ್ಧ ಆರೋಪಪತ್ರ ಸಲ್ಲಿಸಲಾಗಿದ್ದು, ಹಲವರನ್ನು ಎನ್‌ಐಎ ಬಂಧಿಸಿದೆ.

ಇದೇ ವೇಳೆ, ಪಶ್ಚಿಮ ಬಂಗಾಳದ ಭಂಗಾರ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್‌ನ ಮಾಜಿ ಶಾಸಕ ಸಾಕತ್ ಮೊಲ್ಲಾ ಅವರನ್ನು 14 ದಿನಗಳ ಕಾಲ ಎನ್‌ಐಎ ವಶಕ್ಕೆ ಒಪ್ಪಿಸಲಾಗಿದೆ. ಅವರಿಂದ ಮೊಬೈಲ್ ಫೋನ್ ಹಾಗೂ ಪೆನ್‌ಡ್ರೈವ್ ವಶಪಡಿಸಿಕೊಳ್ಳಲಾಗಿದ್ದು, ವಿಧಿವಿಜ್ಞಾನ ಪರೀಕ್ಷೆಗೆ ನ್ಯಾಯಾಲಯ ಅನುಮತಿ ನೀಡಿದೆ.

4 former cadres of banned PFI have been chargesheeted in the Ramalingam murder case. Accused have been charged with harbouring 2 proclaimed offenders who had absconded after the fatal attack in February 2019. pic.twitter.com/IkoneU1XKf

— NIA India (@NIA_India) June 6, 2026

ಸ್ಫೋಟ ಪ್ರಕರಣದಲ್ಲಿ ಈವರೆಗೆ ಮೂವರು ಬಂಧಿತರಾಗಿದ್ದು, ತನಿಖೆಯನ್ನು ಎನ್‌ಐಎ ಮುಂದುವರಿಸಿದೆ.

Author

Anu News

Follow Me
Other Articles
Previous

ವನ್ಯಜೀವಿ ಸೇವಾ ಪ್ರಶಸ್ತಿ: ನಾಲ್ವರು ಅರಣ್ಯ ಸಂರಕ್ಷಕರಿಗೆ ವಿಶಿಷ್ಟ ಗೌರವ

Next

ನೀಟ್-ಯುಜಿ ಮರುಪರೀಕ್ಷೆ: ಪ್ರಶ್ನೆಪತ್ರಿಕೆ ಸೋರಿಕೆ ವದಂತಿಗಳಿಗೆ ಎನ್‌ಟಿಎ ಸ್ಪಷ್ಟನೆ

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ‘ರೇಣಿಗುಂಟ 2’ ಫಸ್ಟ್ ಲುಕ್ ಬಿಡುಗಡೆ; ವಿಜಯ್ ಸೇತುಪತಿ ಶುಭ ಹಾರೈಕೆ
    • ರಾಜ್ಯದ ಆರ್ಥಿಕ ಸ್ಥಿತಿ ಬಗ್ಗೆ ಶ್ವೇತಪತ್ರಕ್ಕೆ ಬಿಜೆಪಿ ಆಗ್ರಹ
    • ನೀಟ್-ಯುಜಿ ಮರುಪರೀಕ್ಷೆ: ಪ್ರಶ್ನೆಪತ್ರಿಕೆ ಸೋರಿಕೆ ವದಂತಿಗಳಿಗೆ ಎನ್‌ಟಿಎ ಸ್ಪಷ್ಟನೆ
    • ರಾಮಲಿಂಗಂ ಕೊಲೆ ಪ್ರಕರಣ: ಪಿಎಫ್‌ಐನ ನಾಲ್ವರ ಮಾಜಿ ವಿರುದ್ಧ ಎನ್‌ಐಎ ಆರೋಪಪಟ್ಟಿ
    • ವನ್ಯಜೀವಿ ಸೇವಾ ಪ್ರಶಸ್ತಿ: ನಾಲ್ವರು ಅರಣ್ಯ ಸಂರಕ್ಷಕರಿಗೆ ವಿಶಿಷ್ಟ ಗೌರವ
    Copyright 2026 — ANU News. All rights reserved. Blogsy WordPress Theme