Skip to content
ANU News
ANU News
  • Home
  • Home
ANU News
ANU News
  • Home
  • Home
ಎಲ್ಲಾ ಸುದ್ದಿದೇಶಪ್ರಾದೇಶಿಕರಾಜಕೀಯ

ಎಐಎಡಿಎಂಕೆಗೆ ಮತ್ತೊಂದು ಶಾಕ್: ಮಾಜಿ ಸಚಿವ ವೆಲ್ಲಮಂಡಿ ನಟರಾಜನ್ ಟಿವಿಕೆ ಸೇರ್ಪಡೆ

By Anu News
May 28, 2026 1 Min Read
0

ಚೆನ್ನೈ: ತಮಿಳುನಾಡಿನ ಮಾಜಿ ಪ್ರವಾಸೋದ್ಯಮ ಸಚಿವ ಹಾಗೂ ಎಐಎಡಿಎಂಕೆ ಹಿರಿಯ ನಾಯಕ ವೆಲ್ಲಮಂಡಿ ನಟರಾಜನ್ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್. ಆನಂದ್ ಸಮ್ಮುಖದಲ್ಲಿ ಅವರು ಪಕ್ಷ ಸೇರಿದರು.

ಇತ್ತೀಚೆಗೆ ಎಐಎಡಿಎಂಕೆಯ ನಾಲ್ವರು ಶಾಸಕರು ಟಿವಿಕೆ ಸೇರಿದ್ದ ಬೆನ್ನಲ್ಲೇ ನಟರಾಜನ್ ಪಕ್ಷ ತೊರೆದಿರುವುದು ಎಐಎಡಿಎಂಕೆಗೆ ಮತ್ತೊಂದು ರಾಜಕೀಯ ಹಿನ್ನಡೆಯಾಗಿದೆ.

ತಿರುಚಿಯ ಪ್ರಭಾವಿ ನಾಯಕರಾಗಿದ್ದ ನಟರಾಜನ್, 2016ರಲ್ಲಿ ತಿರುಚಿ ಪೂರ್ವ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ನೇತೃತ್ವದ ಸರ್ಕಾರದಲ್ಲಿ ಪ್ರವಾಸೋದ್ಯಮ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

ಜಯಲಲಿತಾ ನಿಧನದ ಬಳಿಕ ಎಐಎಡಿಎಂಕೆಯಲ್ಲಿ ಉಂಟಾದ ಆಂತರಿಕ ಭಿನ್ನಾಭಿಪ್ರಾಯಗಳು ಹಾಗೂ ನಿರಂತರ ಚುನಾವಣಾ ಸೋಲುಗಳಿಂದ ಪಕ್ಷ ದುರ್ಬಲಗೊಂಡಿದೆ ಎಂದು ನಟರಾಜನ್ ಆರೋಪಿಸಿದರು.

“ಪಕ್ಷದ ನಾಯಕರು ಒಟ್ಟಾಗಿ ಕುಳಿತು ಭವಿಷ್ಯದ ದಿಕ್ಕು ನಿರ್ಧರಿಸಬೇಕೆಂದು ಹಲವು ಬಾರಿ ಸಲಹೆ ನೀಡಿದ್ದೆ. ಆದರೆ ನನ್ನ ಅಭಿಪ್ರಾಯಗಳನ್ನು ಪರಿಗಣಿಸಲಿಲ್ಲ,” ಎಂದು ಅವರು ಹೇಳಿದರು.

Author

Anu News

Follow Me
Other Articles
Previous

IAF’s Suryakiran Aerobatic Team marks 30 years of aerial excellence

Next

AIADMK suffers fresh jolt as ex-minister Vellamandi Natarajan joins TVK

No Comment! Be the first one.

    Leave a Reply Cancel reply

    Your email address will not be published. Required fields are marked *

    Recent Posts

    • ರಾಷ್ಟ್ರ ನಿರ್ಮಾಣಕ್ಕೆ ಶಿಕ್ಷಣ, ತಂತ್ರಜ್ಞಾನ ಬಳಸಿಕೊಳ್ಳಿ: ಬುಡಕಟ್ಟು ಯುವಕರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಕರೆ
    • ಜಾಗತಿಕ ಭಾರತೀಯ ಪ್ರತಿಭೆಗಳನ್ನು ಭಾರತಕ್ಕೆ ಸೆಳೆಯಲು ‘ಪ್ರಧಾನ ಮಂತ್ರಿ ಸಂಶೋಧನಾ ಪೀಠ’ ಯೋಜನೆ ಆರಂಭ
    • 53 ತಾಯಂದಿರ ಸಾವಿನ ಪ್ರತಿಧ್ವನಿ; NHRC ಮಧ್ಯಪ್ರವೇಶ
    • ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ-2026ಕ್ಕೆ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನ
    • ಬುಲೆಟ್ ರೈಲು ಯೋಜನೆ ಯಶೋಗಾಥೆ; ಮೂರನೇ ಪರ್ವತ ಸುರಂಗ ನಿರ್ಮಾಣ ಪೂರ್ಣ
    Copyright 2026 — ANU News. All rights reserved. Blogsy WordPress Theme